ಮಂಗಳೂರು ಡೈರಿ. ಭಾಗ-೨
ಸಕತ್ ಹಾಟ್ ಮಗಾ..!
ಸಧ್ಯ ಮಂಗಳೂರಿನಲ್ಲಿ ಬಿಸಿಲು ಹೆಚ್ಚಾಗುತ್ತಿದೆ. ನಾನು ಇಲ್ಲಿಗೆ ಬಂದ ಸಮಯದಲ್ಲಿ ಜಡಿ ಮಳೆ ಗುಡಿಸಿಹಾಕುತ್ತಿತ್ತು. ಈಗ ಮಳೆ ಸ್ವಲ್ಪ ಕಡಿಮೆಯಾದ ಕಾರಣಕ್ಕೇನೋ ಬಿಸಿಲಿನ ತಾಪ ಹೆಚ್ಚುತ್ತಿರುವುದು ಬೆನ್ನಲ್ಲಿ ಮೂಡುತ್ತಿರುವ ಬೆವರಿನ ಸಾಲುಗಳು ತಿಳಿಸುತ್ತಿವೆ.
ನನ್ನ ಜೊತೆಯಲ್ಲಿ ಕೆಲಸ ಮಾಡುತ್ತಿರುವ ಇಲ್ಲಿನ ಸ್ಥಳೀಯರು, ‘ನೀವು ಬೇಸಿಗೆಯಲ್ಲಿ ಇಲ್ಲಿರಬೇಕು. ಆಗ ಬಿಸಿಲು ಎಂದರೆ ಏನು ಎಂದು ಗೊತ್ತಾಗುತ್ತದೆ’ ಎಂದು ಬೆದರಿಸುತ್ತಿದ್ದಾರೆ. ನಾನು ಕೆಲಸ ಮಾಡುವ ಪತ್ರಿಕಾ ಕಚೇರಿ ಮಂಗಳೂರಿನ ಇಂಡಸ್ಟ್ರಿಯಲ್ ಏರಿಯಾದಲ್ಲಿರುವುದರಿಂದ ಇಲ್ಲಿ ದಿನನಿತ್ಯ ಬಿಸಿಲಲ್ಲಿ ದುಡಿಯುವ ಕಾರ್ಮಿಕರ ಸಮೂಹವೇ ಕಾಣುತ್ತದೆ. ಮಾಸಲು ಬಟ್ಟೆಯ, ಸಾಧಾರಣ ಉಡುಗೆಯ ಸ್ವಲ್ಪ ಕಂದು ಬಣ್ಣದ ವ್ಯಕ್ತಿತ್ವಗಳು. ನಾನಾದರೂ ಆಫೀಸಿನ -ನಿನ ಕೆಳಗೆ ಕುಳಿತು ಕೆಲಸ ಮಾಡುವುದು, ಇವರಂತೆ ಬಿಸಿಲಿನಲ್ಲಿ ದುಡಿಯುತ್ತಿಲ್ಲವಲ್ಲ ಎಂಬ ಸಮಾದಾನವನ್ನು ನನಗೆ ನಾನೇ ಹೇಳಿಕೊಳ್ಳುತ್ತೇನೆ.
ಮಂಗಳೂರೆಂದರೆ ಘಟ್ಟದ ಕೆಳಗಿನ ಊರು, ಸಮುದ್ರ ಅಂತೆಲ್ಲ ಕಲ್ಪನೆಗಳಿದ್ದವು ಅಷ್ಟೆ. ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿ ಓದುವಾಗ ಘಟ್ಟದ ಕೆಳಗಿನ ಕೂಲಿಯಾಳುಗಳ ಚಿತ್ರಣ ಬರುತ್ತದೆ. ಆದರೆ ಇವತ್ತು ಮಂಗಳೂರು ಎಂದರೆ ದುಬೈ ದುಡ್ಡಿನಿಂದ ಶ್ರ್ರೀಮಂತವಾದ ಪ್ರದೇಶ ಎಂದು ಸ್ನೇಹಿತರು ಹೇಳುತ್ತಾರೆ. ಆದರೆ ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ದಿನನಿತ್ಯ ಕಾಣುವ ಜೀವಗಳು ಸ್ನೇಹಿತರ ಮಾತುಗಳನ್ನು ಅಣಕಿಸುತ್ತಿದ್ದಾರೆ.
ಇನ್ನೆಷ್ಟು ದಿನ ಇಲ್ಲಿ ಕಾಲ ಹಾಕಬೇಕೊ ಗೊತ್ತಿಲ್ಲ. ಆದರೆ ಇಲ್ಲಿನ ಪತ್ರಿಕೆಗಳನ್ನು ಓದುವ ಶಿಕ್ಷೆ ಮಾತ್ರ ತಪ್ಪದ್ದಲ್ಲ ಎಂಬುದು ಮೊದಲಿನ ದಿನವೇ ಗಮನಕ್ಕೆ ಬಂತು. ಇಲ್ಲಿನ ಸ್ಥಳೀಯ ಪತ್ರಿಕೆಗಳ ಮುಖಪುಟವೆಲ್ಲ ಕೆಂಪು ಕೆಂಪು..! ಎಂತಹ -ಟೋಗಳನ್ನು ಅಚ್ಚುಹಾಕುತ್ತಾರೆ ಎಂದರೆ, ರಾತ್ರಿ ನೋಡಿ ಮಲಗಿದರೆ ಕೆಟ್ಟ ಕನಸು ಬೀಳುವುದು ಖಂಡಿತ. ಬರೀ ಕೊಲೆ, ಅಪಘಾತದ ಕ್ರೈಂ ಸುದ್ಧಿಗಳೇ.
ನಿಮಗೆ ತಿಗಣೆಗಳ ಗೊತ್ತಿರಬೇಕು. ಬಿಸಿಲು ಹೆಚ್ಚಾಗಿರು ಕಡೆಗಳಲ್ಲಿ ಈ ಬೆಡ್ ಬಗ್ಸ್ಗಳದ್ದು ವಿಪರೀತ ಕಾಟ. ನನಗೆ ಇವು ಕೊಟ್ಟ ಕಾಟಕ್ಕೆ ಒಮ್ಮೆ ತಿಗಿಣೆಗಳ ಕುರಿತು ಸಂಶೋಧನೆ ಮಾಡಬೇಕು ಅಂದುಕೊಂಡಿದ್ದು ಇದೆ. ಅಂತರ್ಜಾಲದಲ್ಲಿ ಕೆಲವು ವಿಚಿತ್ರ ಮಾಹಿತಿಗಲು ಸಿಗುತ್ತವಾದರೂ ತಿಗಣೆಗಳಿಂದ ನನಗಾದ ಅನುಭವಕ್ಕೆ ಹತ್ತಿರವಾದ ವಿಚಾರಗಲು ಸಿಗಲಿಲ್ಲ. ನಮ್ಮಮ್ಮ ತಿಗಣೆಗಳ ವಿಚಾರದಲ್ಲಿ ಸ್ವಾರಸ್ಯಕರವಾಗಿ ಮಾತನಾಡುತ್ತಾರೆ. ನಮ್ಮ ಮಲೆನಾಡಿನಲ್ಲಿ ಹಿಂದೆ ಈಚಲು ಚಾಪೆಗಳನ್ನು ಬಳಸುತ್ತಿದ್ದರಂತೆ. ಅದರಲ್ಲೂ ಬಾಣಂತನದ ಸಮಯದಲ್ಲಿ ಹೆಂಗಸರಿಗೆ ತಿಗಣೆಗಳಿಂದ ರಕ್ಷಣೆ ನೀಡುವುದೇ ಹರಸಾಹಸವಾಗಿತ್ತಂತೆ. ಮಳೆಗಾಲದಲ್ಲಿ ಬಾಣಂತನ ಮಾಡುವುದೇ ಇಂದು ಕಷ್ಟವಾದರೆ ಈ ತಿಗಣೆಗಳನ್ನು ನಾಶಪಮಾಡುವುದು ಮತಂದು ಕಷ್ಡದ ವಿಚಾರವಾಗಿತ್ತಂತೆ. ಮನೆಯ ಗೋಡೆಗಳೆಲ್ಲ ತಿಗಣೆಗಳನ್ನು ಒರೆದ ಕಲೆಗಲಿಂದ ಕೆಂಪಾಗಿ ಎಲೆ ಅಡಿಕೆ ಎಂಜಲನ್ನು ಉಗಿದ ಹಾಗೆ ಆಗಿರುತ್ತಿತ್ತು ಎಂದು ಅಮ್ಮ ನೆನಪಿಸಿಕೊಳ್ಳುತ್ತಿದ್ದರು.
ಈ ತಿಗಣೆಗಳ ಕುರಿತು ಇನ್ನು ಸ್ವಾರಸ್ಯಕರ ಸ್ವ ಅನುಭವಗಳಿವೆ. ಅದನ್ನೆಲ್ಲಾ ಮುಂದೆ ಎಂದಾದರೂ ಬರೆಯುತ್ತೇನೆ. ಇಲ್ಲಿ ತಿಗಣೆಗಳ ವಿಚಾರ ಯಾಕೆ ಬಂತು ಎಂದರೆ ಈಗ ಮಂಗಳೂರಿನಲ್ಲಿ ವಿಪರೀತ ತಿಗಣೆಕಾಟ. ನಾನಿರುವ ಆಫೀಸಿನಲ್ಲಿ ಎಲ್ಲರೂ ಒಗ್ಗಿಹೋಗಿದ್ದಾರೆ. ಹಾಗಾಗಿ ದಿನನಿತ್ಯ ಲೀಟರ್ಗಟ್ಟಲೆ ರಕ್ತದಾನ ನಡೆಯುತ್ತಿದೆ. ಹಾಗೆಯೆ ಮುಂದುವರಿಯಲಿ ಎಂದು ಆಶಿಸುತ್ತಾ...
ಸಕತ್ ಹಾಟ್ ಮಗಾ..!
ಸಧ್ಯ ಮಂಗಳೂರಿನಲ್ಲಿ ಬಿಸಿಲು ಹೆಚ್ಚಾಗುತ್ತಿದೆ. ನಾನು ಇಲ್ಲಿಗೆ ಬಂದ ಸಮಯದಲ್ಲಿ ಜಡಿ ಮಳೆ ಗುಡಿಸಿಹಾಕುತ್ತಿತ್ತು. ಈಗ ಮಳೆ ಸ್ವಲ್ಪ ಕಡಿಮೆಯಾದ ಕಾರಣಕ್ಕೇನೋ ಬಿಸಿಲಿನ ತಾಪ ಹೆಚ್ಚುತ್ತಿರುವುದು ಬೆನ್ನಲ್ಲಿ ಮೂಡುತ್ತಿರುವ ಬೆವರಿನ ಸಾಲುಗಳು ತಿಳಿಸುತ್ತಿವೆ.
ನನ್ನ ಜೊತೆಯಲ್ಲಿ ಕೆಲಸ ಮಾಡುತ್ತಿರುವ ಇಲ್ಲಿನ ಸ್ಥಳೀಯರು, ‘ನೀವು ಬೇಸಿಗೆಯಲ್ಲಿ ಇಲ್ಲಿರಬೇಕು. ಆಗ ಬಿಸಿಲು ಎಂದರೆ ಏನು ಎಂದು ಗೊತ್ತಾಗುತ್ತದೆ’ ಎಂದು ಬೆದರಿಸುತ್ತಿದ್ದಾರೆ. ನಾನು ಕೆಲಸ ಮಾಡುವ ಪತ್ರಿಕಾ ಕಚೇರಿ ಮಂಗಳೂರಿನ ಇಂಡಸ್ಟ್ರಿಯಲ್ ಏರಿಯಾದಲ್ಲಿರುವುದರಿಂದ ಇಲ್ಲಿ ದಿನನಿತ್ಯ ಬಿಸಿಲಲ್ಲಿ ದುಡಿಯುವ ಕಾರ್ಮಿಕರ ಸಮೂಹವೇ ಕಾಣುತ್ತದೆ. ಮಾಸಲು ಬಟ್ಟೆಯ, ಸಾಧಾರಣ ಉಡುಗೆಯ ಸ್ವಲ್ಪ ಕಂದು ಬಣ್ಣದ ವ್ಯಕ್ತಿತ್ವಗಳು. ನಾನಾದರೂ ಆಫೀಸಿನ -ನಿನ ಕೆಳಗೆ ಕುಳಿತು ಕೆಲಸ ಮಾಡುವುದು, ಇವರಂತೆ ಬಿಸಿಲಿನಲ್ಲಿ ದುಡಿಯುತ್ತಿಲ್ಲವಲ್ಲ ಎಂಬ ಸಮಾದಾನವನ್ನು ನನಗೆ ನಾನೇ ಹೇಳಿಕೊಳ್ಳುತ್ತೇನೆ.
ಮಂಗಳೂರೆಂದರೆ ಘಟ್ಟದ ಕೆಳಗಿನ ಊರು, ಸಮುದ್ರ ಅಂತೆಲ್ಲ ಕಲ್ಪನೆಗಳಿದ್ದವು ಅಷ್ಟೆ. ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿ ಓದುವಾಗ ಘಟ್ಟದ ಕೆಳಗಿನ ಕೂಲಿಯಾಳುಗಳ ಚಿತ್ರಣ ಬರುತ್ತದೆ. ಆದರೆ ಇವತ್ತು ಮಂಗಳೂರು ಎಂದರೆ ದುಬೈ ದುಡ್ಡಿನಿಂದ ಶ್ರ್ರೀಮಂತವಾದ ಪ್ರದೇಶ ಎಂದು ಸ್ನೇಹಿತರು ಹೇಳುತ್ತಾರೆ. ಆದರೆ ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ದಿನನಿತ್ಯ ಕಾಣುವ ಜೀವಗಳು ಸ್ನೇಹಿತರ ಮಾತುಗಳನ್ನು ಅಣಕಿಸುತ್ತಿದ್ದಾರೆ.
ಇನ್ನೆಷ್ಟು ದಿನ ಇಲ್ಲಿ ಕಾಲ ಹಾಕಬೇಕೊ ಗೊತ್ತಿಲ್ಲ. ಆದರೆ ಇಲ್ಲಿನ ಪತ್ರಿಕೆಗಳನ್ನು ಓದುವ ಶಿಕ್ಷೆ ಮಾತ್ರ ತಪ್ಪದ್ದಲ್ಲ ಎಂಬುದು ಮೊದಲಿನ ದಿನವೇ ಗಮನಕ್ಕೆ ಬಂತು. ಇಲ್ಲಿನ ಸ್ಥಳೀಯ ಪತ್ರಿಕೆಗಳ ಮುಖಪುಟವೆಲ್ಲ ಕೆಂಪು ಕೆಂಪು..! ಎಂತಹ -ಟೋಗಳನ್ನು ಅಚ್ಚುಹಾಕುತ್ತಾರೆ ಎಂದರೆ, ರಾತ್ರಿ ನೋಡಿ ಮಲಗಿದರೆ ಕೆಟ್ಟ ಕನಸು ಬೀಳುವುದು ಖಂಡಿತ. ಬರೀ ಕೊಲೆ, ಅಪಘಾತದ ಕ್ರೈಂ ಸುದ್ಧಿಗಳೇ.
ನಿಮಗೆ ತಿಗಣೆಗಳ ಗೊತ್ತಿರಬೇಕು. ಬಿಸಿಲು ಹೆಚ್ಚಾಗಿರು ಕಡೆಗಳಲ್ಲಿ ಈ ಬೆಡ್ ಬಗ್ಸ್ಗಳದ್ದು ವಿಪರೀತ ಕಾಟ. ನನಗೆ ಇವು ಕೊಟ್ಟ ಕಾಟಕ್ಕೆ ಒಮ್ಮೆ ತಿಗಿಣೆಗಳ ಕುರಿತು ಸಂಶೋಧನೆ ಮಾಡಬೇಕು ಅಂದುಕೊಂಡಿದ್ದು ಇದೆ. ಅಂತರ್ಜಾಲದಲ್ಲಿ ಕೆಲವು ವಿಚಿತ್ರ ಮಾಹಿತಿಗಲು ಸಿಗುತ್ತವಾದರೂ ತಿಗಣೆಗಳಿಂದ ನನಗಾದ ಅನುಭವಕ್ಕೆ ಹತ್ತಿರವಾದ ವಿಚಾರಗಲು ಸಿಗಲಿಲ್ಲ. ನಮ್ಮಮ್ಮ ತಿಗಣೆಗಳ ವಿಚಾರದಲ್ಲಿ ಸ್ವಾರಸ್ಯಕರವಾಗಿ ಮಾತನಾಡುತ್ತಾರೆ. ನಮ್ಮ ಮಲೆನಾಡಿನಲ್ಲಿ ಹಿಂದೆ ಈಚಲು ಚಾಪೆಗಳನ್ನು ಬಳಸುತ್ತಿದ್ದರಂತೆ. ಅದರಲ್ಲೂ ಬಾಣಂತನದ ಸಮಯದಲ್ಲಿ ಹೆಂಗಸರಿಗೆ ತಿಗಣೆಗಳಿಂದ ರಕ್ಷಣೆ ನೀಡುವುದೇ ಹರಸಾಹಸವಾಗಿತ್ತಂತೆ. ಮಳೆಗಾಲದಲ್ಲಿ ಬಾಣಂತನ ಮಾಡುವುದೇ ಇಂದು ಕಷ್ಟವಾದರೆ ಈ ತಿಗಣೆಗಳನ್ನು ನಾಶಪಮಾಡುವುದು ಮತಂದು ಕಷ್ಡದ ವಿಚಾರವಾಗಿತ್ತಂತೆ. ಮನೆಯ ಗೋಡೆಗಳೆಲ್ಲ ತಿಗಣೆಗಳನ್ನು ಒರೆದ ಕಲೆಗಲಿಂದ ಕೆಂಪಾಗಿ ಎಲೆ ಅಡಿಕೆ ಎಂಜಲನ್ನು ಉಗಿದ ಹಾಗೆ ಆಗಿರುತ್ತಿತ್ತು ಎಂದು ಅಮ್ಮ ನೆನಪಿಸಿಕೊಳ್ಳುತ್ತಿದ್ದರು.
ಈ ತಿಗಣೆಗಳ ಕುರಿತು ಇನ್ನು ಸ್ವಾರಸ್ಯಕರ ಸ್ವ ಅನುಭವಗಳಿವೆ. ಅದನ್ನೆಲ್ಲಾ ಮುಂದೆ ಎಂದಾದರೂ ಬರೆಯುತ್ತೇನೆ. ಇಲ್ಲಿ ತಿಗಣೆಗಳ ವಿಚಾರ ಯಾಕೆ ಬಂತು ಎಂದರೆ ಈಗ ಮಂಗಳೂರಿನಲ್ಲಿ ವಿಪರೀತ ತಿಗಣೆಕಾಟ. ನಾನಿರುವ ಆಫೀಸಿನಲ್ಲಿ ಎಲ್ಲರೂ ಒಗ್ಗಿಹೋಗಿದ್ದಾರೆ. ಹಾಗಾಗಿ ದಿನನಿತ್ಯ ಲೀಟರ್ಗಟ್ಟಲೆ ರಕ್ತದಾನ ನಡೆಯುತ್ತಿದೆ. ಹಾಗೆಯೆ ಮುಂದುವರಿಯಲಿ ಎಂದು ಆಶಿಸುತ್ತಾ...