ನೆರೆಯ ನಾಡು ಕಂಡು ಬಂದು ತುಂಬಾ ದಿನಗಳ ನಂತರ..... ಮಂಗಳೂರಿನಿಂದ ಪ್ರಕಟವಾಗುತ್ತಿರುವ ದಿನಪತ್ರಿಕೆಯೊಂದರ ಕೆಲಸ ಬಿಟ್ಟು ಬೆಂಗಳೂರಿಗೆ ಬಂದೆ. ಆಗಷ್ಟೆ ಗೆಳೆಯ ದಯಾ ಫೋನು ಮಾಡಿ ಉತ್ತರ ಕರ್ನಾಟಕದ “ನೆರೆ ಪೀಡಿತ ಹಳ್ಳಿಗಳಿಗೆ ಹೋಗಿ ಬರೋಣವಾ” ಅಂದದ್ದು. ಅವತ್ತು ಸೆ. ೫ನೇ ತಾರೀಖು. ನನ್ನ ಬಳಿಯೂ ನಿರ್ದಿಷ್ಟ ಯೋಜನೆಗಳೇನು ಇರಲಿಲ್ಲ. ನೆರೆ ಸುದ್ದಿಗಳನ್ನು ಟಿವಿ, ಪತ್ರಿಕೆಗಳಲ್ಲಿ ಓದಿದ್ದೆ. ಹಾಗಾಗಿ ಮರು ಯೋಚನೆ ಮಾಡದೆ ಇದ್ದ ಚಿಲ್ಲರೆ ದುಡ್ಡನ್ನು ಎತ್ತಿಕೊಂಡು ಹೊರಟು ನಿಂತಿದ್ದೆ. ಮುಂದಿನ ೧೦ದಿನ, ೯ ರಾತ್ರಿ ಸರಿ ಸುಮಾರು ೨೫೦ ಗಂಟೆಗಳನ್ನು ನೆರೆ ಆವೃತ ಪ್ರದೇಶಗಳಲ್ಲಿ ಓಡಾಡಿ ಮತ್ತೆ ಗೂಡು ಸೇರಿಕೊಂಡೆ. ಎದುರಿಗೆ ನಾವು ಚಿತ್ರೀಕರಿಸಿಕೊಂಡ ವಿಡಿಯೋ ಟೇಪುಗಳು ಹಾಗೂ ಸಾವಿರಕ್ಕೂ ಅಧಿಕ ಫೋಟೊಗಳಿದ್ದವು. ಅವತ್ತೇ ಬ್ಲಾಗಿಗೆ ಬರೆದು ಬಿಡಬೇಕು ಅಂದುಕೊಂಡೆ. ಆದರೆ ಅಷ್ಟರಲ್ಲೇ ರಾಜ್ಯದ ರಾಜಕಾರಣದಲ್ಲಿ ಬಂಡಾಯದ ಬಿಸಿ ಆರಂಭವಾಯಿತು. ಯಡ್ಡಿ-ರೆಡ್ಡಿ ಬಣಗಳ ನಡುವಿನ ಕದನದಲ್ಲಿ ನೆರೆ ತೆರೆ-ಮರೆಗೆ ಸರಿದಂತಾಗಿತ್ತು. ಕೊನೆಗೆ ಕೆಲವು ಗೆಳೆಯರ ಅಪೇಕ್ಷೆ ಮೇರೆಗೆ ನೆರೆ ಹಾಗೂ ನಮ್ಮ ಸೀಮಿತ ಅನುಭವಗಳನ್ನು ಇಟ್ಟುಕೊಂಡು ಒಂದು ಸಾಕ್ಷ್ಯ ಚಿತ್ರವನ್ನು ಮಾಡುವ ಸಾಹಸಕ್ಕೆ ಇಳಿದುಬಿಟ್ಟೆವು. ಅಲ್ಲಿಗೆ ಬ್ಲಾಗ್ ಮತ್ತೆ ಮರೆತೇ ಹೊದಂತಾಗಿತ್ತು. ಸಧ್ಯ ಡಾಕ್ಯುಮೆಂಟರಿಗಾಗಿ ಸ್ಕ್ರಿಪ್ಟ್ ಕೆಲಸ ಮುಗಿಸಿ ಮತ್ತೆ ಬ್ಲಾಗ್ ಅಂಗಳದಲ್ಲಿ ಬಂದು ನಿಂತಿದ್ದೇನೆ. ಆದರೆ ನೆರ
ಇಪ್ಪತ್ತನೆ ಶತಮಾನದ ಮಧ್ಯಭಾಗದಲ್ಲಿ ಉತ್ತರ ಕರ್ನಾಟಕದಿಂದ ಪಾ.ಪುರವರು ಪ್ರಕಟಿಸುತ್ತಿದ್ದ "ವಿಶಾಲ ಕರ್ನಾಟಕ" ಎಂಬ ಪತ್ರಿಕೆಯಲ್ಲಿ ನಮ್ಮ ಬೀchi ಬರೆಯುತ್ತಿದ್ದ ಅಂಕಣದ ಹೆಸರು "ಕೆನೆ ಮೊಸರು". ಇದನ್ನೆ ನನ್ನ blogಗಿಗೆ ನಾಮಕರಣ ಮಾಡಿದ್ದೇನೆ.