ಮುಂಜಾನೆ ಹೊತ್ತಲ್ಲಿ ಸಂಭವಿಸಿದ ಎರಡು ಆತ್ಮಹತ್ಯೆಗಳ ಕುರಿತು
ಪ್ರಶಾಂತ್ ಹುಲ್ಕೋಡು
ಮೇ.೨೩, ೨೦೦೯ ಹಾಗೂ ಜು.೨೩, ೨೦೦೯. ಈ ಎರಡು ದಿನಗಳ ಮುಂಜಾವು ಆರಂಭಗೊಂಡಿದ್ದು ಆತ್ಮಹತ್ಯೆಗಳ ಮೂಲಕ !
ದಕ್ಷಿಣ ಕೊರಿಯಾದಲ್ಲಿ ಮೇ.೨೩ರಂದು ಮುಂಜಾವು ಆಗಷ್ಟೇ ಬಿಚ್ಚಿಕೊಳ್ಳುತ್ತಿತ್ತು. ದೇಶದ ಮಾಜಿ ಅಧ್ಯಕ್ಷ ರೋ ಮೊ ಯುನ್ ನೋಡಿದ ಕೊನೆಯ ಬೆಳಗಿನ ಜಾವವದು. ಮಿಲಿಯಾಂತರ ಡಾಲರ್ಗಳ ಹಗರಣದಲ್ಲಿ ವಿಚಾರಣೆಗೆ ಒಳಗಾಗಿದ್ದರೋ ವಿಪರೀತ ಪಾಪಪ್ರeಯಿಂದ ನರಳುತ್ತಿದ್ದರು. ಅವರಿಗೆ ತಾನು ಆಳಿದ ಜನರ ಎದುರಿಗೆ ಮುಖ ತೋರಿಸುವುದೇ ಅವಮಾನಕರ ಎಂಬ ಭಾವನೆ ಮೂಡಿ ಬಹಳ ದಿನಗಳೇ ಆಗಿದ್ದವು. ಅದೇನನ್ನಿಸಿತೋ ಏನೋ ರೋ ತಮ್ಮ ಆತ್ಮಹತ್ಯೆಗೆ ಅಂತಹದೊಂದು ಮುಂಜಾವನ್ನು ಆಯ್ದುಕೊಂಡರು. ತಮ್ಮ ಮನೆಯ ಹಿಂಬದಿಯ ಬೆಟ್ಟದ ಸಾಲುಗಳ ಮೇಲಿಂದ ಒಂದೇ ನೆಗೆತ. ರೋ ಇತಿಹಾಸವಾಗಿ ಹೋದರು.
ಇಂತಹುದೆ ಒಂದು ಮುಂಜಾವುಗೆ ಬೆಂಗಳೂರು ತೆರೆದುಕೊಂಡಿದ್ದು ಜುಲೈ ೨೩ರಂದು. ಬಿಬಿಎಂಪಿಯ ಸಹಾಯಕ ಆಯುಕ್ತ ಲಕ್ಷ್ಮಣ್ ಬೆಳಗ್ಗೆ ವಾಕಿಂಗ್ ಎಂದು ಬನಶಂಕರಿಯ ತಮ್ಮ ಮನೆಯಿಂದ ಹೊರಟವರು ಸೀದಾ ತಮ್ಮ ಕಚೇರಿ ತಲುಪಿದರು. ಅದೇನು ಯೋಚಿಸಿದರೊ, ಜನರಿಗೆ ಮುಖ ತೋರಿಸಲು ಹಿಂಸೆಯಾಗುತ್ತಿದೆ ಎಂದು ಪತ್ರಬರೆದಿಟ್ಟ ಲಕ್ಷಣ್ ನೇಣು ಬಿಗಿದುಕೊಂಡರು. ಇವರು ಮಾರ್ಚ್ ೧೮ರಂದು ಲೋಕಾಯುಕ್ತ ದಾಳಿಗೆ ಒಳಗಾಗಿದ್ದರು. ಅವರ ಮೇಲೂ ಕೋಟಿ ರೂಪಾಯಿ ಲಂಚದ ಆರೋಪವಿತ್ತು.
ಮೇಲ್ನೋಟಕ್ಕೆ ಈ ಎರಡು ಸಾವುಗಳು ಪ್ರಪಂಚದಲ್ಲಿ ದಿನನಿತ್ಯ ಸಂಭವಿಸುವ ಅಸಂಖ್ಯಾತ ಸಾವುಗಳ ಹಾಗೆ ಕಾಣಿಸಿದರು, ಸಾರ್ವಜನಿಕ ಜೀವನದಲ್ಲಿ ಮಾಡಿದ ತಪ್ಪಿಗಾಗಿ ತಮ್ಮನ್ನು ತಾವು ಶಿಕ್ಷಿಸಿಕೊಂಡ ಅಪರೂಪದ ಘಟನೆಗಳಾಗಿವೆ. ಇಬ್ಬರೂ ಸಾಯುವ ಮುನ್ನ ಪತ್ರ ಬರೆದಿಟ್ಟಿದ್ದಾರೆ. ತಮ್ಮ ಮೇಲಿನ ಆರೋಪಗಳಿಂದ ಸಮಾಜದಲ್ಲಿ ಮುಖ ತೋರಿಸಲಾಗದ ಮನಸ್ಥಿತಿ ಇಬ್ಬರಲ್ಲೂ ವ್ಯಕ್ತವಾಗಿದೆ. ಸಾರ್ವಜನಿಕ ಜೀವನದಲ್ಲಿ ಆರೋಪಗಳಿಲ್ಲದೆ ಬದುಕುತ್ತಿರುವವರನ್ನು ದುರ್ಬೀನು ಹಾಕಿ ಹುಡಕಬೇಕು, ಹಾಗಿದೆ ಇವತ್ತಿನ ಪರಿಸ್ಥಿತಿ. ಇವರಿಬ್ಬರು ತೆಗೆದುಕೊಂಡ ತೀರ್ಮಾನವನ್ನು ಎಲ್ಲಾ ರಾಜಕಾರಣಿಗಳು, ರಾಜಕೀಯ ನಾಯಕರೂ ತೆಗೆದುಕೊಳ್ಳಬೇಕು. ಆದರೆ ಇವರಲ್ಲಿದ್ದ ಮರ್ಯಾದೆ ಅಂಜುವ ಗುಣ ಇಲ್ಲದಿರುವುದರಿಂದ ಪುಣ್ಯ ಅವರೆಲ್ಲ ಬದುಕಿದ್ದಾರೆ ಎನ್ನಿಸುತ್ತದೆ.
೧೦ನೆ ತರಗತಿಯಲ್ಲಿ -ಲಾದೆ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಯೊಬ್ಬ ಸಮಾಜಕ್ಕೆ ಅಂಜಿಯೆ ಈ ನಿರ್ಧಾರಕ್ಕೆ ಬಂದಿರುತ್ತಾನೆ. ಅಂತವರಿಗೆ ಮಾರ್ಯಾದೆ ಕಳೆದುಹೋಯಿತು ಎಂಬುದೆ ಜೀವನಕ್ಕೆ ಕೊನೆಹಾಡಲು ಪ್ರೇರಣೆಯಾಗುತ್ತದೆ.
ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ರೋ ಹಾಗೂ ಲಕ್ಷಣ್ಗೆ ತಮ್ಮ ಮೇಲಿನ ಆರೊಪಗಳನ್ನು ತಾಂತ್ರಿಕವಾಗಿ ನಿವಾರಿಸಿಕೊಳ್ಳುವ ಅವಕಾಶವನ್ನು ಈ ವ್ಯವಸ್ಥೆ ದಯಪಾಲಿಸುತ್ತಿತ್ತೇನೋ, ಆದರೆ ಕಳೆದು ಹೋದ ಮಾನವನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂಬುದು ಇಬ್ಬರಿಗೂ ಅರ್ಥವಾಗಿತ್ತು ಎನ್ನಿಸುತ್ತದೆ. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಎಂಬ ಗಾದೆ ಮಾತಿದೆ. ಆದರೆ ಮಾನಕ್ಕೆ ಅಂಜದಿದ್ದರೆ ಮಾತ್ರ ನೈತಿಕತೆ ಕಳೆದುಕೊಂಡೂ ಬದುಕಬಹುದು ಎಂಬುದಕ್ಕೆ ನಮ್ಮಲ್ಲಿ ಅನೇಕ ಉದಾಹರಣೆಗಳಿವೆ. ಉದಾಹರಣೆಗೆ ಎಲ್ಲಾ ರಾಜಕೀಯ ಧುರೀಣರು, ಇತ್ಯಾದಿ.
ಹಾಗಾಗಿಯೆ ಇಂತಹ ಸಾವುಗಳು ಮುಖ್ಯವಾಗುತ್ತವೆ. ಮೂರು ಬಿಟ್ಟು ನಿಂತವರ ಎದುರಿಗೆ ಯಾವುದನ್ನೂ ಬಿಡಲಾಗಾದೆ ಹಾಗಂತ ಲೋಭದ ಜೀವನವನ್ನು ತ್ಯಜಿಸದೆ, ವ್ಯಸಸ್ಥೆಯೆ ದಯಪಾಲಿಸಿರುವ ಭ್ರಚ್ಟಾಚಾರದ ಮಾರ್ಗಗಳನ್ನು ಆಯ್ದುಕೊಂಡು ಬದುಕುವ ಲಕ್ಷ್ಮಣ್ರಂತವರಿಗೆ ಆತ್ಮಹತ್ಯೆಯಲ್ಲದೆ ಬೇರೆ ದಾರಿ ಇರುವುದಿಲ್ಲ. ಸತ್ತವರ ಕುರಿತು ಕಟುವಾಗಿ ಮಾತನಾಡಬಾರದು ಅಂತಾರೆ. ಆದರೆ ಪ್ರಲೋಭನೆಯ ಬದುಕಿನಲ್ಲಿ ನೈತಿಕತೆಯನ್ನು ಉಳಿಸಿಕೊಳ್ಳಬೇಕೆಂಬ ಹಂಬಲವಿರುವವರು ತಮ್ಮ ಚಾರಿತ್ರ್ಯವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಒಂದಲ್ಲಾ ಒಂದು ದಿನ ಇಂತಹ ಸವಾಲುಗಳಗೆ ತಲೆಬಾಗಲೇ ಬೇಕಾಗುತ್ತದೆ. ಎಷ್ಟಾದರೂ ಪುಸ್ತಕದ ಕಾನೂನಿಗಿಂತ ಸಮಾಜದ ಕಾನುನು ದೊಡ್ಡದು. ಅದಕ್ಕೆ ತಲೆಬಾಗುವ ಸ್ಥಿತಿ ನೈತಿಕತೆಯನ್ನು ಕಾಲೆದುಕೊಂಡವರಿಗೆ ಬರಲಿ ಎಂದು ಆಶಿಸುತ್ತ ಇಬ್ಬರ ಸಾವಿಗೆ ಈ ಒಂದು ನಿಮಿಷಗಳ ಮೌನಾಚರಣೆ.
ಪ್ರಶಾಂತ್ ಹುಲ್ಕೋಡು
ಮೇ.೨೩, ೨೦೦೯ ಹಾಗೂ ಜು.೨೩, ೨೦೦೯. ಈ ಎರಡು ದಿನಗಳ ಮುಂಜಾವು ಆರಂಭಗೊಂಡಿದ್ದು ಆತ್ಮಹತ್ಯೆಗಳ ಮೂಲಕ !
ದಕ್ಷಿಣ ಕೊರಿಯಾದಲ್ಲಿ ಮೇ.೨೩ರಂದು ಮುಂಜಾವು ಆಗಷ್ಟೇ ಬಿಚ್ಚಿಕೊಳ್ಳುತ್ತಿತ್ತು. ದೇಶದ ಮಾಜಿ ಅಧ್ಯಕ್ಷ ರೋ ಮೊ ಯುನ್ ನೋಡಿದ ಕೊನೆಯ ಬೆಳಗಿನ ಜಾವವದು. ಮಿಲಿಯಾಂತರ ಡಾಲರ್ಗಳ ಹಗರಣದಲ್ಲಿ ವಿಚಾರಣೆಗೆ ಒಳಗಾಗಿದ್ದರೋ ವಿಪರೀತ ಪಾಪಪ್ರeಯಿಂದ ನರಳುತ್ತಿದ್ದರು. ಅವರಿಗೆ ತಾನು ಆಳಿದ ಜನರ ಎದುರಿಗೆ ಮುಖ ತೋರಿಸುವುದೇ ಅವಮಾನಕರ ಎಂಬ ಭಾವನೆ ಮೂಡಿ ಬಹಳ ದಿನಗಳೇ ಆಗಿದ್ದವು. ಅದೇನನ್ನಿಸಿತೋ ಏನೋ ರೋ ತಮ್ಮ ಆತ್ಮಹತ್ಯೆಗೆ ಅಂತಹದೊಂದು ಮುಂಜಾವನ್ನು ಆಯ್ದುಕೊಂಡರು. ತಮ್ಮ ಮನೆಯ ಹಿಂಬದಿಯ ಬೆಟ್ಟದ ಸಾಲುಗಳ ಮೇಲಿಂದ ಒಂದೇ ನೆಗೆತ. ರೋ ಇತಿಹಾಸವಾಗಿ ಹೋದರು.
ಇಂತಹುದೆ ಒಂದು ಮುಂಜಾವುಗೆ ಬೆಂಗಳೂರು ತೆರೆದುಕೊಂಡಿದ್ದು ಜುಲೈ ೨೩ರಂದು. ಬಿಬಿಎಂಪಿಯ ಸಹಾಯಕ ಆಯುಕ್ತ ಲಕ್ಷ್ಮಣ್ ಬೆಳಗ್ಗೆ ವಾಕಿಂಗ್ ಎಂದು ಬನಶಂಕರಿಯ ತಮ್ಮ ಮನೆಯಿಂದ ಹೊರಟವರು ಸೀದಾ ತಮ್ಮ ಕಚೇರಿ ತಲುಪಿದರು. ಅದೇನು ಯೋಚಿಸಿದರೊ, ಜನರಿಗೆ ಮುಖ ತೋರಿಸಲು ಹಿಂಸೆಯಾಗುತ್ತಿದೆ ಎಂದು ಪತ್ರಬರೆದಿಟ್ಟ ಲಕ್ಷಣ್ ನೇಣು ಬಿಗಿದುಕೊಂಡರು. ಇವರು ಮಾರ್ಚ್ ೧೮ರಂದು ಲೋಕಾಯುಕ್ತ ದಾಳಿಗೆ ಒಳಗಾಗಿದ್ದರು. ಅವರ ಮೇಲೂ ಕೋಟಿ ರೂಪಾಯಿ ಲಂಚದ ಆರೋಪವಿತ್ತು.
ಮೇಲ್ನೋಟಕ್ಕೆ ಈ ಎರಡು ಸಾವುಗಳು ಪ್ರಪಂಚದಲ್ಲಿ ದಿನನಿತ್ಯ ಸಂಭವಿಸುವ ಅಸಂಖ್ಯಾತ ಸಾವುಗಳ ಹಾಗೆ ಕಾಣಿಸಿದರು, ಸಾರ್ವಜನಿಕ ಜೀವನದಲ್ಲಿ ಮಾಡಿದ ತಪ್ಪಿಗಾಗಿ ತಮ್ಮನ್ನು ತಾವು ಶಿಕ್ಷಿಸಿಕೊಂಡ ಅಪರೂಪದ ಘಟನೆಗಳಾಗಿವೆ. ಇಬ್ಬರೂ ಸಾಯುವ ಮುನ್ನ ಪತ್ರ ಬರೆದಿಟ್ಟಿದ್ದಾರೆ. ತಮ್ಮ ಮೇಲಿನ ಆರೋಪಗಳಿಂದ ಸಮಾಜದಲ್ಲಿ ಮುಖ ತೋರಿಸಲಾಗದ ಮನಸ್ಥಿತಿ ಇಬ್ಬರಲ್ಲೂ ವ್ಯಕ್ತವಾಗಿದೆ. ಸಾರ್ವಜನಿಕ ಜೀವನದಲ್ಲಿ ಆರೋಪಗಳಿಲ್ಲದೆ ಬದುಕುತ್ತಿರುವವರನ್ನು ದುರ್ಬೀನು ಹಾಕಿ ಹುಡಕಬೇಕು, ಹಾಗಿದೆ ಇವತ್ತಿನ ಪರಿಸ್ಥಿತಿ. ಇವರಿಬ್ಬರು ತೆಗೆದುಕೊಂಡ ತೀರ್ಮಾನವನ್ನು ಎಲ್ಲಾ ರಾಜಕಾರಣಿಗಳು, ರಾಜಕೀಯ ನಾಯಕರೂ ತೆಗೆದುಕೊಳ್ಳಬೇಕು. ಆದರೆ ಇವರಲ್ಲಿದ್ದ ಮರ್ಯಾದೆ ಅಂಜುವ ಗುಣ ಇಲ್ಲದಿರುವುದರಿಂದ ಪುಣ್ಯ ಅವರೆಲ್ಲ ಬದುಕಿದ್ದಾರೆ ಎನ್ನಿಸುತ್ತದೆ.
೧೦ನೆ ತರಗತಿಯಲ್ಲಿ -ಲಾದೆ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಯೊಬ್ಬ ಸಮಾಜಕ್ಕೆ ಅಂಜಿಯೆ ಈ ನಿರ್ಧಾರಕ್ಕೆ ಬಂದಿರುತ್ತಾನೆ. ಅಂತವರಿಗೆ ಮಾರ್ಯಾದೆ ಕಳೆದುಹೋಯಿತು ಎಂಬುದೆ ಜೀವನಕ್ಕೆ ಕೊನೆಹಾಡಲು ಪ್ರೇರಣೆಯಾಗುತ್ತದೆ.
ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ರೋ ಹಾಗೂ ಲಕ್ಷಣ್ಗೆ ತಮ್ಮ ಮೇಲಿನ ಆರೊಪಗಳನ್ನು ತಾಂತ್ರಿಕವಾಗಿ ನಿವಾರಿಸಿಕೊಳ್ಳುವ ಅವಕಾಶವನ್ನು ಈ ವ್ಯವಸ್ಥೆ ದಯಪಾಲಿಸುತ್ತಿತ್ತೇನೋ, ಆದರೆ ಕಳೆದು ಹೋದ ಮಾನವನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂಬುದು ಇಬ್ಬರಿಗೂ ಅರ್ಥವಾಗಿತ್ತು ಎನ್ನಿಸುತ್ತದೆ. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಎಂಬ ಗಾದೆ ಮಾತಿದೆ. ಆದರೆ ಮಾನಕ್ಕೆ ಅಂಜದಿದ್ದರೆ ಮಾತ್ರ ನೈತಿಕತೆ ಕಳೆದುಕೊಂಡೂ ಬದುಕಬಹುದು ಎಂಬುದಕ್ಕೆ ನಮ್ಮಲ್ಲಿ ಅನೇಕ ಉದಾಹರಣೆಗಳಿವೆ. ಉದಾಹರಣೆಗೆ ಎಲ್ಲಾ ರಾಜಕೀಯ ಧುರೀಣರು, ಇತ್ಯಾದಿ.
ಹಾಗಾಗಿಯೆ ಇಂತಹ ಸಾವುಗಳು ಮುಖ್ಯವಾಗುತ್ತವೆ. ಮೂರು ಬಿಟ್ಟು ನಿಂತವರ ಎದುರಿಗೆ ಯಾವುದನ್ನೂ ಬಿಡಲಾಗಾದೆ ಹಾಗಂತ ಲೋಭದ ಜೀವನವನ್ನು ತ್ಯಜಿಸದೆ, ವ್ಯಸಸ್ಥೆಯೆ ದಯಪಾಲಿಸಿರುವ ಭ್ರಚ್ಟಾಚಾರದ ಮಾರ್ಗಗಳನ್ನು ಆಯ್ದುಕೊಂಡು ಬದುಕುವ ಲಕ್ಷ್ಮಣ್ರಂತವರಿಗೆ ಆತ್ಮಹತ್ಯೆಯಲ್ಲದೆ ಬೇರೆ ದಾರಿ ಇರುವುದಿಲ್ಲ. ಸತ್ತವರ ಕುರಿತು ಕಟುವಾಗಿ ಮಾತನಾಡಬಾರದು ಅಂತಾರೆ. ಆದರೆ ಪ್ರಲೋಭನೆಯ ಬದುಕಿನಲ್ಲಿ ನೈತಿಕತೆಯನ್ನು ಉಳಿಸಿಕೊಳ್ಳಬೇಕೆಂಬ ಹಂಬಲವಿರುವವರು ತಮ್ಮ ಚಾರಿತ್ರ್ಯವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಒಂದಲ್ಲಾ ಒಂದು ದಿನ ಇಂತಹ ಸವಾಲುಗಳಗೆ ತಲೆಬಾಗಲೇ ಬೇಕಾಗುತ್ತದೆ. ಎಷ್ಟಾದರೂ ಪುಸ್ತಕದ ಕಾನೂನಿಗಿಂತ ಸಮಾಜದ ಕಾನುನು ದೊಡ್ಡದು. ಅದಕ್ಕೆ ತಲೆಬಾಗುವ ಸ್ಥಿತಿ ನೈತಿಕತೆಯನ್ನು ಕಾಲೆದುಕೊಂಡವರಿಗೆ ಬರಲಿ ಎಂದು ಆಶಿಸುತ್ತ ಇಬ್ಬರ ಸಾವಿಗೆ ಈ ಒಂದು ನಿಮಿಷಗಳ ಮೌನಾಚರಣೆ.