ಮಂಗಳೂರು ಡೈರಿ! ಭಾಗ 1
ಜನವಾಹಿನಿಯ ಪಾಳು ಬಿದ್ದ ಬಂಗಲೆಯ ನೆರಳಿನಲ್ಲಿ....
ನಾನು ಎಂಟನೆ ತರಗತಿಯಲ್ಲಿದ್ದಾಗಿನ ನೆನಪು. ತೀರ್ಥಹಳ್ಳಿಯಲ್ಲಿ ನಾನಿದ್ದ ಹಾಸ್ಟೆಲ್ಲಿಗೆ ಜನವಾಹಿನಿ ಪತ್ರಿಕೆ ಬರುತ್ತಿತ್ತು. ಬೆಳಗ್ಗೆ ಆಗುತ್ತಲೆ ಪತ್ರಿಕೆಗಾಗಿ ಪೈಪೋಟಿ ನಡೆಸುತ್ತಿದ್ದೆವು. ಇದಕ್ಕಾಗಿ ಹಲವಾರು ಭಾರಿ ನಮ್ಮಲ್ಲಿ ಗಲಾಟೆಗಳು ಆಗಿದ್ದವು. ಅದೇಕೋ ಆವತ್ತು ಜನವಾಹಿನಿಯೊಂದಿಗೆ ಆರ್ಥವಾಗದ ಸಂದಂಧವೊಂದು ನಮ್ಮಂತ ಚಿಕ್ಕವಯಸ್ಸಿನ ಹುಡುಗರಿಗೆ ಬೆಳೆದಿತ್ತು. ಹಾಗೆಯೆ ಲಂಕೇಶ್ ಪತ್ರಿಕೆ ಕೂಡ ಅದರಲ್ಲಿ ಬರುತ್ತಿದ್ದ ತುಂಟಾಟಕ್ಕಾಗಿ ಓದುತ್ತಿದ್ದೆವು!.
ಇವೆಲ್ಲವೂ ಹಳೆಯ ದಿನಗಳು, ಮಾಸಿದ ನೆನಪುಗಳು. ಸಹಜವಾಗಿಯೆ ನಾನು ಸಾಹಿತ್ಯದ ಬಗ್ಗೆ ಬೆಳೆಸಿಕೊಂಡಿದ್ದ ಆಸಕ್ತಿ, ನನ್ನಲ್ಲಿ ಹಲವು ಆಲೋಚನೆಗಳನ್ನು ಹುಟ್ಟುಹಾಕಿತು. ಹೊಸ ಪ್ರಪಂಚವೊಂದನ್ನು ಕಂಡ ಆನುಭವ. ಮಲೆನಾಡಿನಲ್ಲಿಯೆ ಹುಟ್ಟಿ ಬೆಳೆದು ಆಲ್ಲಿನ ಪರಿಸರದ ಜೊತೆ ಹೊಂದಿದ ಸಂಬಂಧವೊಂದು ಕಳಚಿಕೊಂಡದ್ದು ಚಳುವಳಿ ಹೋರಾಟ ಅಂತ ಬೀದಿಗೆ ಬಿದ್ದ ಮೇಲೆಯೆ.
ಅಲ್ಲಿಯವರೆಗಿದ್ದ ಊರಲ್ಲಿ ಶಿಕಾರಿ ಹುಚ್ಚು, ಕಾಡು ಸುತ್ತುವ ಗೀಳುಗಳು ವೈಚಾರಿಕತೆ ಎಂಬ ಸೋಗಿನಲ್ಲಿ ಪೇವಲವಾಗಿ ಕಂಡಿದ್ದವು.
ಜನವಾಹಿನಿ ನಂತರ ಇಷ್ಟವಾಗಿದ್ದು ಆದು ಪ್ರಗತಿಪರ ವಿಚಾರಗಳನ್ನು ಪ್ರತಿಪಾದಿಸುವ ಪತ್ರಿಕೆ ಎಂಬ ಕಾರಣಕ್ಕೆ. ಹಾಗಂತ ನಾನು ನಂಬಿಕೊಂಡಿದ್ದೆ. ಆಷ್ಟರಲ್ಲಾಗಲೆ ಅದು ತನ್ನ ಆಂತರಿಕ ಜಗಳಗಳಿಂದಾಗಿ ಮುಚ್ಚಿಹೋಗುತ್ತು. ಹಾಸ್ಟೆಲ್ಲಿಗೆ ಈಗ ಬೇರೆ ಪತ್ರಿಕೆ ಬರುತ್ತಿದೆ. ಈಗಿರುವವರು ಪತ್ರಿಕೆಗಾಗು ಮುಗಿಬೀಳುವ ಮನಸ್ಥಿತಿಯಲ್ಲಿ ಇಲ್ಲ ಎಂಬು ಒಂದು ಅಚ್ಚರಿ.
ಮಂಗಳೂರಿಗೆ ಬಂದು 4 ದಿನಗಳಿಗೆ ಇಂದು ಸ್ನೇಹಿತರ ಜೊತೆ ಬೆಳಗ್ಗಿನ ತಿಂಡಿ ಮುಗಿಸಿ ಇಂಡಸ್ಟ್ರಿಯಲ್ ಎರಿಯಾದ ದಾರಿಗುಂಟ ಹೋಗಿಬಂದೆ. ಮಧ್ಯದಲ್ಲಿ ಇದೇ ಜನವಾಹಿನಿ ಕಚೇರಿ ಎಂದು ಪಾಳು ಬಿದ್ದಿದ್ದ ಬಂಗಲೆ ತೋರಿಸಿದರು ಗೆಳೆಯರು. ನನಗೆ ಬಾಲ್ಯದ ಗೆಳೆಯರೊಬ್ಬರನ್ನು ನೋಡಿದಷ್ಟು ಖುಷಿಯಾಯಿತು. ಜೊತೆಗೆ ಒಂದುರೀತಿಯ ಬೇಜಾರು ಆಯಿತು. ಇವತ್ತು ಜನವಾಹಿನಿ ಇದ್ದಿದ್ದರೆ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕ ಹಾಗೆ ಬದಲಾಗುತ್ತಿತ್ತೆನೊ. ಆದರೆ ಕನಿಷ್ಠ ಆಂತಹದೊಂದು ಪತ್ರಿಕೆಯ ಆಗತ್ಯವಂತೂ ಇದೆ ಅನ್ನಿಸುತ್ತದೆ.
ಸುಮ್ಮನೆ ಇರಲಿ ಎಂದು ಜನವಾಹಿನಿಯ ಅವಶೇಷಗಳ ಫೋಟೊ ತೆಗೆದುಕೊಂಡೆ. ನಿಮ್ಮ ಗಮನಕ್ಕೂ ಇರಲಿ ಎಂದು ಇದನ್ನು ಅಪ್ ಲೋಡ್ ಮಡಿದ್ದೇನೆ. ನೋಡಿ.....
ಜನವಾಹಿನಿಯ ಪಾಳು ಬಿದ್ದ ಬಂಗಲೆಯ ನೆರಳಿನಲ್ಲಿ....
ನಾನು ಎಂಟನೆ ತರಗತಿಯಲ್ಲಿದ್ದಾಗಿನ ನೆನಪು. ತೀರ್ಥಹಳ್ಳಿಯಲ್ಲಿ ನಾನಿದ್ದ ಹಾಸ್ಟೆಲ್ಲಿಗೆ ಜನವಾಹಿನಿ ಪತ್ರಿಕೆ ಬರುತ್ತಿತ್ತು. ಬೆಳಗ್ಗೆ ಆಗುತ್ತಲೆ ಪತ್ರಿಕೆಗಾಗಿ ಪೈಪೋಟಿ ನಡೆಸುತ್ತಿದ್ದೆವು. ಇದಕ್ಕಾಗಿ ಹಲವಾರು ಭಾರಿ ನಮ್ಮಲ್ಲಿ ಗಲಾಟೆಗಳು ಆಗಿದ್ದವು. ಅದೇಕೋ ಆವತ್ತು ಜನವಾಹಿನಿಯೊಂದಿಗೆ ಆರ್ಥವಾಗದ ಸಂದಂಧವೊಂದು ನಮ್ಮಂತ ಚಿಕ್ಕವಯಸ್ಸಿನ ಹುಡುಗರಿಗೆ ಬೆಳೆದಿತ್ತು. ಹಾಗೆಯೆ ಲಂಕೇಶ್ ಪತ್ರಿಕೆ ಕೂಡ ಅದರಲ್ಲಿ ಬರುತ್ತಿದ್ದ ತುಂಟಾಟಕ್ಕಾಗಿ ಓದುತ್ತಿದ್ದೆವು!.
ಇವೆಲ್ಲವೂ ಹಳೆಯ ದಿನಗಳು, ಮಾಸಿದ ನೆನಪುಗಳು. ಸಹಜವಾಗಿಯೆ ನಾನು ಸಾಹಿತ್ಯದ ಬಗ್ಗೆ ಬೆಳೆಸಿಕೊಂಡಿದ್ದ ಆಸಕ್ತಿ, ನನ್ನಲ್ಲಿ ಹಲವು ಆಲೋಚನೆಗಳನ್ನು ಹುಟ್ಟುಹಾಕಿತು. ಹೊಸ ಪ್ರಪಂಚವೊಂದನ್ನು ಕಂಡ ಆನುಭವ. ಮಲೆನಾಡಿನಲ್ಲಿಯೆ ಹುಟ್ಟಿ ಬೆಳೆದು ಆಲ್ಲಿನ ಪರಿಸರದ ಜೊತೆ ಹೊಂದಿದ ಸಂಬಂಧವೊಂದು ಕಳಚಿಕೊಂಡದ್ದು ಚಳುವಳಿ ಹೋರಾಟ ಅಂತ ಬೀದಿಗೆ ಬಿದ್ದ ಮೇಲೆಯೆ.
ಅಲ್ಲಿಯವರೆಗಿದ್ದ ಊರಲ್ಲಿ ಶಿಕಾರಿ ಹುಚ್ಚು, ಕಾಡು ಸುತ್ತುವ ಗೀಳುಗಳು ವೈಚಾರಿಕತೆ ಎಂಬ ಸೋಗಿನಲ್ಲಿ ಪೇವಲವಾಗಿ ಕಂಡಿದ್ದವು.
ಜನವಾಹಿನಿ ನಂತರ ಇಷ್ಟವಾಗಿದ್ದು ಆದು ಪ್ರಗತಿಪರ ವಿಚಾರಗಳನ್ನು ಪ್ರತಿಪಾದಿಸುವ ಪತ್ರಿಕೆ ಎಂಬ ಕಾರಣಕ್ಕೆ. ಹಾಗಂತ ನಾನು ನಂಬಿಕೊಂಡಿದ್ದೆ. ಆಷ್ಟರಲ್ಲಾಗಲೆ ಅದು ತನ್ನ ಆಂತರಿಕ ಜಗಳಗಳಿಂದಾಗಿ ಮುಚ್ಚಿಹೋಗುತ್ತು. ಹಾಸ್ಟೆಲ್ಲಿಗೆ ಈಗ ಬೇರೆ ಪತ್ರಿಕೆ ಬರುತ್ತಿದೆ. ಈಗಿರುವವರು ಪತ್ರಿಕೆಗಾಗು ಮುಗಿಬೀಳುವ ಮನಸ್ಥಿತಿಯಲ್ಲಿ ಇಲ್ಲ ಎಂಬು ಒಂದು ಅಚ್ಚರಿ.
ಮಂಗಳೂರಿಗೆ ಬಂದು 4 ದಿನಗಳಿಗೆ ಇಂದು ಸ್ನೇಹಿತರ ಜೊತೆ ಬೆಳಗ್ಗಿನ ತಿಂಡಿ ಮುಗಿಸಿ ಇಂಡಸ್ಟ್ರಿಯಲ್ ಎರಿಯಾದ ದಾರಿಗುಂಟ ಹೋಗಿಬಂದೆ. ಮಧ್ಯದಲ್ಲಿ ಇದೇ ಜನವಾಹಿನಿ ಕಚೇರಿ ಎಂದು ಪಾಳು ಬಿದ್ದಿದ್ದ ಬಂಗಲೆ ತೋರಿಸಿದರು ಗೆಳೆಯರು. ನನಗೆ ಬಾಲ್ಯದ ಗೆಳೆಯರೊಬ್ಬರನ್ನು ನೋಡಿದಷ್ಟು ಖುಷಿಯಾಯಿತು. ಜೊತೆಗೆ ಒಂದುರೀತಿಯ ಬೇಜಾರು ಆಯಿತು. ಇವತ್ತು ಜನವಾಹಿನಿ ಇದ್ದಿದ್ದರೆ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕ ಹಾಗೆ ಬದಲಾಗುತ್ತಿತ್ತೆನೊ. ಆದರೆ ಕನಿಷ್ಠ ಆಂತಹದೊಂದು ಪತ್ರಿಕೆಯ ಆಗತ್ಯವಂತೂ ಇದೆ ಅನ್ನಿಸುತ್ತದೆ.
ಸುಮ್ಮನೆ ಇರಲಿ ಎಂದು ಜನವಾಹಿನಿಯ ಅವಶೇಷಗಳ ಫೋಟೊ ತೆಗೆದುಕೊಂಡೆ. ನಿಮ್ಮ ಗಮನಕ್ಕೂ ಇರಲಿ ಎಂದು ಇದನ್ನು ಅಪ್ ಲೋಡ್ ಮಡಿದ್ದೇನೆ. ನೋಡಿ.....