ವಿಷಯಕ್ಕೆ ಹೋಗಿ
ಮಂಗಳೂರು ಡೈರಿ ಕೊನೆಯ ಭಾಗ

ಸಲಿಂಗಿ ಪ್ರೇಮಿ(?)ಗಳ ನೆನಪಿನಲ್ಲಿ...!

ಕಡಲ ತಡಿಯ ಈ ಊರುಗೆ ಹಲವು ಭಾಷೆಗಳಲ್ಲಿ ಬೇರೆ ಬೇರೆ ಹೆಸರುಗಳಿವೆ ಅನ್ನುವುದೆ ಕುತೂಹಲಕಾರಿ ಸಂಗತಿ. ನಮ್ಮ ಊರುಗಳ ಹೆಸರು ಜಗತ್ತಿನ ಯಾವ ಭಾಷೆಯಾದರು ತನ್ನ ಗುಣ ಧರ್ಮವನ್ನು ಬಿಟ್ಟು ಕೊಡುವುದಿಲ್ಲ. ಆದರೆ ಮಂಗಳೂರು ಕನ್ನಡ ಭಾಷೆಯ ಹೆಸರು ಮಾತ್ರ. ಇದು ಸರಕಾರಿ ಕಡತಗಳಲ್ಲಿ ಅಧಿಕೃತತೆ ಹೊಂದಿರಬಹುದೇನೋ, ಆದರೆ ಜನ ಸಂಸ್ಕೃತಿ ಭಾಷೆಗಳಲ್ಲಿ ತಮ್ಮದೆ ಹೆಸರಗಳನ್ನು ಮಂಗಳೂರಿಗೆ ನೀಡಿದ್ದಾರೆ. ತುಳು ಭಾಷಿಕರು ಇದನ್ನು ‘ಕುಡ್ಲ’ ಎನ್ನುತ್ತಾರೆ. ಬ್ಯಾರಿ ಮಾತನಾಡುವವರಿಗೆ ಇದು ‘ಮೈಕಳ’ವಾಗಿದೆ. ಹತ್ತಿರದ ಕೇರಳಿಗರ ಮಲೆಯಾಳಂನಲ್ಲಿ ಇದು ‘ಮಂಗಳಾಪುರ’.


ಪುಸ್ತಕ ಪ್ರೀತಿ, ಅಕ್ಷರ ಪ್ರೀತಿಗಳು ಇಲ್ಲಿ ಹೆಚ್ಚು ಕಾಣಸಿಗುತ್ತವೆ. ಜೀವನಾನುಭವವನ್ನು ಕತೆಯಾಗಿಸಿದ ಅದ್ಭುತ ಕತೆಗಾರರು ದಕ್ಷಿಣ ಕನ್ನಡದಿಂದ ಮೂಡಿ ಬಂದಿದ್ದಾರೆ. ಆದರೆ ಕಳೆದ ಎರಡು ತಿಂಗಳಲ್ಲಿ ಕಂಡಿದ್ದು ಮಂಗಳೂರಿನ ಬದಲಾದ ಪರಿಸ್ಥಿತಿ. ಸೃಜನಶೀಲತೆಗಿಂತ ಇಲ್ಲಿ ಧಾರ್ಮಿಕ ಕಟ್ಟಳೆಗಳು ಬಹುಮುಖ್ಯವಾಗಿ ಕಾಡುತ್ತವೆ. ಇವತ್ತು ಧರ್ಮ ಐಡೆಂಟಿಟಿ ನೀಡುತ್ತಿದೆ. ಹಿಂದುತ್ವ ಪ್ರಬಲವಾಗುತ್ತಿರುವ ಜೊತೆಯಲ್ಲೇ ಮುಸ್ಲಿಂ, ಕ್ರಿಶ್ಚಿಯನ್ ಧರ್ಮದವರು ತಮ್ಮ ಧಾರ್ಮಿಕ ಐಡೆಂಟಿಟಿಗಾಗಿ ಸೆಣಸಾಡುತ್ತಿದ್ದಾರೆ.
ಇಲ್ಲಿನ ಮತ್ತೊಂದು ವಿಶೇಷ ಸಂಜೆ ಪತ್ರಿಕೆಗಳದ್ದು. ಮುಖ ಪುಟದ ತುಂಬಾ ಭೀಕರ ಚಿತ್ರಗಳನ್ನು ಹೊತ್ತು ಬರುವ ಸಂಜೆ ಪತ್ರಿಕೆಗಳು ಮದ್ಯಾನಕೆಲ್ಲ ಸ್ಟಾಲುಗಳಲ್ಲಿ ನೇತಾಡುತ್ತಿರುತ್ತವೆ. ಆಟೋದವರು, ಸಿಟಿ ಬಸ್ಸುಗಳ ಕಂಡಕ್ಟರ್‌ಗಳು ಒಂದು ಕೈಯಲ್ಲಿ ಸಂಜೆ ಪತ್ರಿಕೆಗಳನ್ನು ಹಿಡಿದುಕೊಂಡು ತಮ್ಮ ಕೆಲಸ ಮಾಡುತ್ತಿರುತ್ತಾರೆ. ಯಾವಾಗಲೋ, ಮತ್ತೆಲ್ಲೋ ಸಂಭವಿಸಿದ ಕೊಲೆಯ ಫಾಲೋ‌ಅಪ್‌ಗಾಗಿ ತುಡಿಯುತ್ತಿರುತ್ತಾರೆ. ಅದನ್ನೇ ಪತ್ರಿಕೆಗಳು ಉಣ ಬಡಿಸುತ್ತವೆ. ಅಥವಾ ಪತ್ರಿಕೆಗಳು ಬೆಳೆಸಿದ ಇಂತಹ ಅಭಿರುಚಿ ಇದಕ್ಕೆ ಕಾರಣ ವಿರಬಹುದು. ಪತ್ರಿಗಳಲ್ಲಿ ಬರುವ ಅರೆನಗ್ನ ಚಿತ್ರಗಳನ್ನು ಕದ್ದು ಮುಚ್ಚಿಯಾದರು ನೋಡುವ ಮನಸ್ಥಿತಿ ಎಲ್ಲರಲ್ಲೂ ಇದೆ. ಇದನ್ನು ಕೊಡಲಾರವನು ಸೆಣಸಾಟದಲ್ಲಿ ಹಿಂದೆ ಬೀಳುತ್ತಾನೆ.

ಬಹುತೇಕ ಆಟೋ ಡ್ರೈವರ್‌ಗಳು ಮಾಫಿಯಾ ಜೊತೆ ಸಂಪರ್ಕ ಹೊಂದಿದ್ದಾರೆ. ನಿಮಗೆ ಬೇಕಾದ ‘ಮಾಲ’ನ್ನು ಎದುರಿಗೆ ನಿಲ್ಲಿಸುತ್ತೇವೆ ಎಂದು ಹೇಳಿದ ಆಟೋ ಡ್ರೈವರ್‌ಗಳನ್ನು ಸುಮ್ಮನೆ ಮಾತನಾಡಿಸಿದರೆ, ಮಂಗಳೂರಿನ ಮೇಲ್ನೋಟದ ಐಶಾರಾಮಿ ಬದುಕಿನ ದುಸ್ವಪ್ನಗಳಿಗೆ ಅವರು ಒಳಗಾಗಿರುವುದು ಕಾಣುತ್ತದೆ.

ಇಂದು ಸಿಟಿ ಬಸ್ಸಿನಲ್ಲಿ ನಡೆದ ಘಟನೆಯನ್ನು ತಿಳಿಸದಿದ್ದರೆ ಮಂಗಳೂರಿನ ಅನುಭವ ಪರಿಪೂರ್ಣವಾಗುವುದಿಲ್ಲ. ಅನಾಮಿಕ ಸ್ಟಾಪೊಂದರಲ್ಲಿ ಹತ್ತಿದ ಸಿಟಿ ಬಸ್ಸು ಆಗಲೆ ಬೆವರಿದ ಮುಖಗಳನ್ನು ತುಂಬಿಕೊಂಡಿತ್ತು. ಹಿಂದಿನ ಸೀಟಿನಲ್ಲಿ ಸಲಿಂಗಿಗಳ ದಂಪತಿ(?) ಕುಳಿತಿತ್ತು. ಇಬ್ಬರು ಮಹಿಳೆಯರು ಸಹಜವಾಗಿ ಹುಡುವ ಸೀರೆ ಉಟ್ಟಿದ್ದರು. ಆದರೆ ಇಬ್ಬರಲ್ಲಿ ಸಮಾಜದ ಇತರೆ ಪ್ರೇಮಿಗಳಲ್ಲಿರುವ ಭಾವನೆಗಳು ಕಣ್ಣಿಟ್ಟು ತಡಕಾಡಿದರೆ ಮಾತ್ರ ತಿಳಿಯುವಂತಿತ್ತು. ನಾನು ಹತ್ತಿದ ತಕ್ಷಣ ನನ್ನೆಡೆ ಇಬ್ಬರ ಹರಿಸಿದ ನೋಟದಲ್ಲಿಯೇ ಅಂತಹ ಭಾವಗಳು ಕಾಣುತ್ತಿದ್ದವು. ಕಿಟಕಿ ಬಳಿ ಕುಳಿತಿದ್ದ ಸಲಿಂಗಿಗೆ ಹೆಣ್ಣಿನ ಸುಪ್ತ ಭಾವನೆಗಳು ಆವರಿಸಿಕೊಂಡಂತಿತ್ತು. ಇತರ ಹುಡುಗರು ತನ್ನನ್ನು ನೋಡುತ್ತಾರಾ ಎಂಬ ಕುತೂಹದ ಕಣ್ಣುಗಳಿಗೆ ನಾಚಿಕೆಯ ಮೆರಗು.


ಆದರೆ ಪಕ್ಕದಲ್ಲಿ ಸ್ವಲ್ಪ ದೃಢಕಾಯದ ಸಲಿಂಗಿಗೆ ಮಾತ್ರ ಗಂಡಿನ ಗಂಭೀರತೆ. ಜೇಬಿನಲ್ಲಿದ್ದ ಗುಟ್ಕಾದ ಪೊಟ್ಟಣವನ್ನು ತೆಗೆದು ಎಲ್ಲರ ಎದುರೆ ಬಾಯಿಗೆ ಹಾಕಿಕೊಂಡು ಮತ್ತೆ ತನ್ನ ಪ್ರೇಮಿಯೊಡನೆ ಮಾತಿನ ಸರಸ. ಅವಳ ಮೈಯ ಸ್ಪರ್ಷದ ಸುಖ ಅನುಭವಿಸುವ ಕಾತರತೆ. ಅವಳಿಗೋ ಯಾರಾದರು ನೋಡಿದರೆ ಎಂಬ ಕಪ್ಪೆ ಚಿಪ್ಪಿನ ಮನಸ್ಸು.

ಪಕ್ಕದಲ್ಲಿ ಕುಳಿತಿದ್ದ ‘ಸರಿ’ ಲಿಂಗಿ ಯುವಕನಿಗೆ ಮಾತ್ರ ಜನರು ಹಿಜಿಡಾಗಳ ಪಕ್ಕ ಕುಳಿತದ್ದಕ್ಕೆ ನನ್ನನ್ನು ಹೇಗೆ ನೋಡುತ್ತಾರೆ ಎಂಬ ಆತಂಕ. ಆದರೆ ಕುತೂಹಲಕ್ಕಾಗಿ ಅವರೆಡೆಗೆ ತಿರುಗುವ ಕಣ್ಣುಗಾಲಿಗಳು. ಅವನ ಪಕ್ಕದಲ್ಲಿ ಕುಳಿತಿದ್ದ ವಯಸ್ಸಾಯ ವ್ಯಕ್ತಿಯೊಬ್ಬರು ಸಲಿಂಗಿ ಪ್ರೇಮಿಗಳೆಡೆ ಕದ್ದು ಮುಚ್ಚು ತಮ್ಮ ನೋಟ ಹರಿಸುತ್ತಿದ್ದರು. ಅದು ಸಮಾಜದ ನಾಡಿ ಮಿಡಿತ. ಪ್ರತಿಯೊಬ್ಬರಿಗೂ ಇರುವ ಸುಪ್ತ ಭಾವನೆಗಳನ್ನು ‘ಸಚ್ ಕಾ ಸಾಮ್ನಾ’ ಸವಾಲಿಗೆ ಒಡ್ಡಲಾರದ ಭಯ. ಅರ್ಧ ಸತ್ಯ ಮತ್ತರ್ಧ ಮಿತ್ಯಗಳ ಮಿಶ್ರಣ.
ಹಾಗೆ ನೋಡುತ್ತಿರುವಾಗಲೇ ಬಸ್ಸು ಕಾಲಿಯಾಯಿತು. ನಾನು ಸಲಿಂಗಿ ಪ್ರೇಮಿಗಳ ಪಕ್ಕದಲ್ಲಿ ಕುಳಿತೆ. ಬಸ್ಸು ಮುಂದೆ ಹೋಗುವುದಿಲ್ಲವಾ? ಎಂದು ಸಹಜವಾಗಿಯೆ ಪ್ರಶ್ನಿಸಿ ಹೆಣ್ಣಿನ ಸಹಜತೆ ತೋರುತ್ತಿದ್ದ ಕಿಟಿಕಿ ಬದಿಯ ಕಣ್ಣುಗಳ ಜೊತೆ ನನ್ನ ಕಣ್ಣೊಟ ಬೆರೆಸಿದೆ. ‘ಏನಪ್ಪಾ, ಗೊತ್ತಾಗುತ್ತಿಲ್ಲ’ ಎಂದ ಉತ್ತರದಲ್ಲಿ ಸ್ವಲ್ಪ ರಾಗದ ಮಿಶ್ರಣ.

ಅದೇ ಮಂಗಳೂರಿನ ಕಡಲ ತಡಿಯಲ್ಲಿ ಮುಳುಗುತ್ತಿದ್ದ ಸೂರ‍್ಯನ ಕೆಂಬಣ್ಣ. ಎಲ್ಲವು ಅರ್ಥವಾದಂತಾಗಿ, ಮತ್ತೇನೊ ಗೊತ್ತಾಗದ ಗೊಂದಲದ ನೆನಪುಗಳು. ಮಂಗಳೂರು ಡೈರಿ ನಾಳೆ ಮತ್ತೆಲ್ಲಿಯದೋ ಡೈರಿ. ಅಕ್ಷರಗಳ ಸಂತೆಯಲ್ಲಿ ನೆನಪುಗಳ ಬಿಕರಿಗೆ ಮಾತ್ರ ದಿನವೂ ಸಂತೆ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

'ಕನಸಿನ ಎಡಿಟರ್'!

ಯುವ ಪತ್ರಕರ್ತನ 'ಕನಸಿನ ಎಡಿಟರ್' ಒಂದು ಸುಳಿವನ್ನೂ ಕೊಡದೆ ಕಣ್ಮರೆಯಾಗಿದ್ದಾರೆ! ಇ. ರಾಘವನ್ ಕೈಗೆ ಆಯುಧ ಕೊಟ್ಟು, ರಣ ಬಿಸಿಲಿನ ಮೈದಾನದ ನಡುವೆ, ಶತ್ರುವನ್ನು ಗುರಿಇಟ್ಟು ತೋರಿಸಿ, ಮರೆಯಲ್ಲಿ ನಿಂತು ಮುಗುಳ್ನುಗುತ್ತಿದ್ದ ಭಾವ ಹಠಾತ್ ಗೊಂದಲಕ್ಕೀಡಾಗಿದೆ. ಒಂದು ವರ್ಷಕ್ಕೂ ಕಡಿಮೆ ಅವಧಿಯ ಒಡನಾಟವನ್ನು ಈ ಹೊತ್ತಿಗೆ ವಿವರಿಸಲು ಪದಗಳು ಸಿಗುತ್ತಿಲ್ಲ. ತೊಟ್ಟು ಕಟ್ಟಿಸಿಕೊಂಡು, ಸುವಾಸನೆ ಬೀರುವ ಮಾಲೆ ರೂಪಹೊಂದಿ, ಮಾರುಕಟ್ಟೆಯ ಬಿಸಿಲಿನಲ್ಲಿ ನೀರು ಚಿಮುಕಿಸಿಕೊಂಡು, ಗಿರಾಕಿಯ ಆಗಮನಕ್ಕಾಗಿ ಕಾಯುತ್ತಿದ್ದ "ಅಕ್ಷರ"ಗಳನ್ನೂ ಗೌರವದಿಂದಲೇ ನೋಡಿಕೊಳ್ಳುತ್ತಿದ್ದ ಸಂಪಾದಕರೊಬ್ಬರ ಕುರಿತು ಮಾತುಗಳಿವು. ಇಷ್ಟೆಲ್ಲಾ ಇಲ್ಯಾಕೆ ಹೇಳಬೇಕಾಗಿದೆ ಎಂದರೆ ನಿನ್ನೆ(ಶನಿವಾರ) ನಂ.1 ಕನ್ನಡ ಪತ್ರಿಕೆಯ ಸಂಪಾದಕ ಎತಿರಾಜನ್ ರಾಘವನ್ ನಮ್ಮನ್ನಗಲಿದ್ದಾರೆ. ಅವರ ಕೆಳಗೆ ಕೆಲಸ ಮಾಡಿದ ಅನುಭವ ಇದೇ ಮೇ.18ಕ್ಕೆ ಒಂದು ವರ್ಷ ತುಂಬುತ್ತದೆ, ಅಷ್ಟೆ! ಅವರು ತೀರಿಕೊಂಡರು ಎಂಬ ಸುದ್ದಿ 'ಸ್ಫೋಟ'ವಾಗುವ ಹೊತ್ತಿಗೆ ನಾನು ಕಚೇರಿಯಲ್ಲಿದ್ದೆ. ಕಳೆದ ನೂರ ಎಪ್ಪತ್ತು ಚಿಲ್ಲರೆ ದಿನಗಳ ಹಿಂದೆ ಶುರುವಾದ 'ಯುವ ಗರ್ಜನೆ' ಎಂಬ ಪರಿಕಲ್ಪನೆಗೆ ದೊಡ್ಡ ಮೈಲಿಗಲ್ಲು ಸಿಕ್ಕ ದಿನ ಅದು. ಪ್ರಾದೇಶಿಕ ಭಾಷೆಯ ಪತ್ರಿಕೆಯೊಂದು ಕಾರ್ಪೋರೇಟ್ ಜಗತ್ತಿನ ವೇದಿಯಲ್ಲಿ ನಿಂತು ತಮ್ಮ ನಿಲುವನ್ನು ತಣ್ಣಗೆ ವಿವರಿಸಿದ ಸಮಯ ಕೂಡ. ಅದರ ವರದಿಗಾ...
ಕಲ್ಲೂರಿ ಎಂಬ ಸಿನಿಮಾ ನೋಡಿದ್ದೀರಾ...? ಪ್ರಶಾಂತ್ ಹುಲ್ಕೋಡು ಸಿನಿಮಾ ಹೇಗಿರಬೇಕು ಎಂದು ನಿರ್ದಿಷ್ಟವಾಗಿ ಹೇಳುವದು ಕಷ್ಟ. ಆದರೆ ಒಳ್ಳೆಯ ಸಿನಿಮಾ ನೋಡುಗನ್ನು ತನ್ನಲ್ಲಿ ಒಂದು ಪಾತ್ರವಾಗಿಸುತ್ತದೆ ಅನ್ನುತ್ತಾರೆ. ಹಾಗಾಗಿಯೆ ಬಾಲಿವುಡ್ ಮಂದಿ ರಿಯಲ್ ಸ್ಟೋರಿಗಳನ್ನು ರೀಲ್‌ನಲ್ಲಿ ತರಲು ಹೆಚ್ಚು ಶ್ರಮವಹಿಸುತ್ತಾರೆ. ಬಾಲಿವುಡ್‌ನಲ್ಲಿಯೂ ಆಂತಹ ಪ್ರಯೋಗಗಳಾಗುತ್ತಿವೆ. ಬದುಕಿಗೆ ಹತ್ತಿರವೆನಿಸುವ ಕತೆಗಳನ್ನು ತೆರೆಗೆ ಅಳವಡಿಸುವುದು ಸುಲಭದ ಕೆಲಸವಲ್ಲ. ಅದಕ್ಕೆ ತನ್ನದೆ ಆದ ಕಮಿಟ್‌ಮೆಂಟ್, ಡೆಡಿಕೇಶನ್ ಇರಬೇಕಾಗುತ್ತದೆ. ಚಿತ್ರದ ನಿರ್ದೇಶಕನಿಗೆ ಅಂತಹ ಸಂವೇದನೆ ಇರದಿದ್ದರೆ ಇಡೀ ಚಿತ್ರ ಹಾಳಾಗಿಬಿಡುತ್ತದೆ. ಈ ಮಾತಿಗೆ ವಿರುದ್ಧವಾಗಿ ಇತ್ತೀಚೆಗೆ ಬಂದ ತಮಿಳಿನ ಕಲ್ಲೂರಿ ಉತ್ತಮ ಉದಾಹರಣೆ. ಈ ಚಿತ್ರದ ಕುರಿತು ಹೇಳುವ ಮುನ್ನ ನಿಮಗೆ ಇದನ್ನು ತೆರೆಗೆ ತಂದ ನಿರ್ದೇಶಕನ ಶ್ರಮದ ಕುರಿತು ಹೇಳಬೇಕು. ಅದು ಕಲ್ಲೂರಿಗಿಂತ ಲೂ ಇಂಟೆರಿಸ್ಟಿಂಗ್. ತಮಿಳಿನ ಪ್ರಸಿದ್ಧ ಚಿತ್ರ ಕಾದಲ್ ನೆನಪಿರಬೇಕು ನಿಮಗೆ. ಅಂತರಜಾತಿ ಪ್ರೇಮ ಕತೆಯನ್ನು ಅದ್ಭುತವಾಗಿ ನಿರೂಪಿಸಿದ ಚಿತ್ರ. ಅದರ ನಿರ್ದೇಶಕ ಬಾಲಾಜಿ ಶಕ್ತಿವೇಲು ಕಾದಲ್ ನಂತರ ನಿರ್ದೇಶಿಸಿದ ಚಿತ್ರವೇ ಕಲ್ಲೂರಿ. ತಮಿಳಿನಲ್ಲಿ ಕಲ್ಲೂರಿ ಎಂದರೆ ಕಾಲೇಜು ಎಂದರ್ಥ. ಕಾದಲ್ ಸೂಪರ್ ಹಿಟ್ ಆದ ನಂತರ ಬಾಲಾಜಿ ಶಕ್ತಿವೇಲು ಮುಂದೆ ನಿರ್ಮಾಪಕರ ದಂಡೇ ನೆರೆದಿತ್ತಂತೆ. ಆದರೆ ಈ ಮಹಾಶಯ ಯಾವುದನ್ನು ಒಪ್ಪಿಕೊಳ್ಳದೆ ಆರ್ಥಿಕ...
ಮಂಗಳೂರು ಡೈರಿ! ಭಾಗ 1 ಜನವಾಹಿನಿಯ ಪಾಳು ಬಿದ್ದ ಬಂಗಲೆಯ ನೆರಳಿನಲ್ಲಿ.... ನಾನು ಎಂಟನೆ ತರಗತಿಯಲ್ಲಿದ್ದಾಗಿನ ನೆನಪು. ತೀರ್ಥಹಳ್ಳಿಯಲ್ಲಿ ನಾನಿದ್ದ ಹಾಸ್ಟೆಲ್ಲಿಗೆ ಜನವಾಹಿನಿ ಪತ್ರಿಕೆ ಬರುತ್ತಿತ್ತು. ಬೆಳಗ್ಗೆ ಆಗುತ್ತಲೆ ಪತ್ರಿಕೆಗಾಗಿ ಪೈಪೋಟಿ ನಡೆಸುತ್ತಿದ್ದೆವು. ಇದಕ್ಕಾಗಿ ಹಲವಾರು ಭಾರಿ ನಮ್ಮಲ್ಲಿ ಗಲಾಟೆಗಳು ಆಗಿದ್ದವು. ಅದೇಕೋ ಆವತ್ತು ಜನವಾಹಿನಿಯೊಂದಿಗೆ ಆರ್ಥವಾಗದ ಸಂದಂಧವೊಂದು ನಮ್ಮಂತ ಚಿಕ್ಕವಯಸ್ಸಿನ ಹುಡುಗರಿಗೆ ಬೆಳೆದಿತ್ತು. ಹಾಗೆಯೆ ಲಂಕೇಶ್ ಪತ್ರಿಕೆ ಕೂಡ ಅದರಲ್ಲಿ ಬರುತ್ತಿದ್ದ ತುಂಟಾಟಕ್ಕಾಗಿ ಓದುತ್ತಿದ್ದೆವು!. ಇವೆಲ್ಲವೂ ಹಳೆಯ ದಿನಗಳು, ಮಾಸಿದ ನೆನಪುಗಳು. ಸಹಜವಾಗಿಯೆ ನಾನು ಸಾಹಿತ್ಯದ ಬಗ್ಗೆ ಬೆಳೆಸಿ ಕೊಂಡಿದ್ದ ಆಸಕ್ತಿ, ನನ್ನಲ್ಲಿ ಹಲವು ಆಲೋಚನೆಗಳನ್ನು ಹುಟ್ಟುಹಾಕಿತು. ಹೊಸ ಪ್ರಪಂಚವೊಂದನ್ನು ಕಂಡ ಆನುಭವ. ಮಲೆನಾಡಿನಲ್ಲಿಯೆ ಹುಟ್ಟಿ ಬೆಳೆದು ಆಲ್ಲಿನ ಪರಿಸರದ ಜೊತೆ ಹೊಂದಿದ ಸಂಬಂಧವೊಂದು ಕಳಚಿಕೊಂಡದ್ದು ಚಳುವಳಿ ಹೋರಾಟ ಅಂತ ಬೀದಿಗೆ ಬಿದ್ದ ಮೇಲೆಯೆ. ಅಲ್ಲಿಯವರೆಗಿದ್ದ ಊರಲ್ಲಿ ಶಿಕಾರಿ ಹುಚ್ಚು, ಕಾಡು ಸುತ್ತುವ ಗೀಳುಗಳು ವೈಚಾರಿಕತೆ ಎಂಬ ಸೋಗಿನಲ್ಲಿ ಪೇವಲವಾಗಿ ಕಂಡಿದ್ದವು. ಜನವಾಹಿನಿ ನಂತರ ಇಷ್ಟವಾಗಿದ್ದು ಆದು ಪ್ರಗತಿಪರ ವಿಚಾರಗಳನ್ನು ಪ್ರತಿಪಾದಿಸುವ ಪತ್ರಿಕೆ ಎಂಬ ಕಾರಣಕ್ಕೆ. ಹಾಗಂತ ನಾನು ನಂಬಿಕೊಂಡಿದ್ದೆ. ಆಷ್ಟರಲ್ಲಾಗಲೆ ಅದು ತನ್ನ ಆಂತರಿಕ ಜಗಳಗಳಿಂದಾಗಿ ಮುಚ್ಚಿಹೋಗುತ್ತು. ಹಾಸ್ಟೆಲ್ಲಿಗೆ ಈ...