ವಿಷಯಕ್ಕೆ ಹೋಗಿ
ಕಲ್ಲೂರಿ ಎಂಬ ಸಿನಿಮಾ ನೋಡಿದ್ದೀರಾ...?

ಪ್ರಶಾಂತ್ ಹುಲ್ಕೋಡು

ಸಿನಿಮಾ ಹೇಗಿರಬೇಕು ಎಂದು ನಿರ್ದಿಷ್ಟವಾಗಿ ಹೇಳುವದು ಕಷ್ಟ. ಆದರೆ ಒಳ್ಳೆಯ ಸಿನಿಮಾ ನೋಡುಗನ್ನು ತನ್ನಲ್ಲಿ ಒಂದು ಪಾತ್ರವಾಗಿಸುತ್ತದೆ ಅನ್ನುತ್ತಾರೆ. ಹಾಗಾಗಿಯೆ ಬಾಲಿವುಡ್ ಮಂದಿ ರಿಯಲ್ ಸ್ಟೋರಿಗಳನ್ನು ರೀಲ್‌ನಲ್ಲಿ ತರಲು ಹೆಚ್ಚು ಶ್ರಮವಹಿಸುತ್ತಾರೆ. ಬಾಲಿವುಡ್‌ನಲ್ಲಿಯೂ ಆಂತಹ ಪ್ರಯೋಗಗಳಾಗುತ್ತಿವೆ. ಬದುಕಿಗೆ ಹತ್ತಿರವೆನಿಸುವ ಕತೆಗಳನ್ನು ತೆರೆಗೆ ಅಳವಡಿಸುವುದು ಸುಲಭದ ಕೆಲಸವಲ್ಲ. ಅದಕ್ಕೆ ತನ್ನದೆ ಆದ ಕಮಿಟ್‌ಮೆಂಟ್, ಡೆಡಿಕೇಶನ್ ಇರಬೇಕಾಗುತ್ತದೆ. ಚಿತ್ರದ ನಿರ್ದೇಶಕನಿಗೆ ಅಂತಹ ಸಂವೇದನೆ ಇರದಿದ್ದರೆ ಇಡೀ ಚಿತ್ರ ಹಾಳಾಗಿಬಿಡುತ್ತದೆ.
ಈ ಮಾತಿಗೆ ವಿರುದ್ಧವಾಗಿ ಇತ್ತೀಚೆಗೆ ಬಂದ ತಮಿಳಿನ ಕಲ್ಲೂರಿ ಉತ್ತಮ ಉದಾಹರಣೆ. ಈ ಚಿತ್ರದ ಕುರಿತು ಹೇಳುವ ಮುನ್ನ ನಿಮಗೆ ಇದನ್ನು ತೆರೆಗೆ ತಂದ ನಿರ್ದೇಶಕನ ಶ್ರಮದ ಕುರಿತು ಹೇಳಬೇಕು. ಅದು ಕಲ್ಲೂರಿಗಿಂತಲೂ ಇಂಟೆರಿಸ್ಟಿಂಗ್. ತಮಿಳಿನ ಪ್ರಸಿದ್ಧ ಚಿತ್ರ ಕಾದಲ್ ನೆನಪಿರಬೇಕು ನಿಮಗೆ. ಅಂತರಜಾತಿ ಪ್ರೇಮ ಕತೆಯನ್ನು ಅದ್ಭುತವಾಗಿ ನಿರೂಪಿಸಿದ ಚಿತ್ರ. ಅದರ ನಿರ್ದೇಶಕ ಬಾಲಾಜಿ ಶಕ್ತಿವೇಲು ಕಾದಲ್ ನಂತರ ನಿರ್ದೇಶಿಸಿದ ಚಿತ್ರವೇ ಕಲ್ಲೂರಿ. ತಮಿಳಿನಲ್ಲಿ ಕಲ್ಲೂರಿ ಎಂದರೆ ಕಾಲೇಜು ಎಂದರ್ಥ.
ಕಾದಲ್ ಸೂಪರ್ ಹಿಟ್ ಆದ ನಂತರ ಬಾಲಾಜಿ ಶಕ್ತಿವೇಲು ಮುಂದೆ ನಿರ್ಮಾಪಕರ ದಂಡೇ ನೆರೆದಿತ್ತಂತೆ. ಆದರೆ ಈ ಮಹಾಶಯ ಯಾವುದನ್ನು ಒಪ್ಪಿಕೊಳ್ಳದೆ ಆರ್ಥಿಕವಾಗಿ ಹಿಂದುಳಿದ ತಮಿಳುನಾಡಿನ ದಕ್ಷಿಣ ಭಾಗದ ಸರಕಾರಿ ಕಾಲೇಜೊಂದನ್ನು ಆಯ್ದುಕೊಂಡು ಅಲ್ಲಿನ ವಿಧ್ಯಾರ್ಥಿಗಳ ದಿನಚರಿಯನ್ನು ಅಧ್ಯಯನ ಮಾಡಲಾರಂಭಿಸಿದನು. ಅದಕ್ಕಾಗಿ ಕಾಲೇಜಿನ ಕ್ಯಾಂಟೀನು, ಲೈಬ್ರರಿ, ಕ್ಲಾಸ್ ರೂಂಗಳಲ್ಲಿ ಗುಪ್ತ ಕ್ಯಾಮರಾಗಳನ್ನಿಟ್ಟುದ್ದನಂತೆ. ಕೊನೆಗೆ ಹಳ್ಳಿಗಾಡಿನಿಂದ ಬರುತ್ತಿದ್ದ ವಿಧ್ಯಾರ್ಥಿಗಳ ಕತೆಯನ್ನೇ ಆಧರಿಸಿ ಸಿನಿಮಾಕ್ಕೆ ಸ್ಕ್ರೀನ್ ಪ್ಲೇ ಸಿದ್ಧಪಡಿಸಿದರು ಬಾಲಾಜಿ. ಇನ್ನು ವಿಶೇಷವೆಂದರೆ ಕತೆಗೆ ಪ್ರಮುಖ ಪಾತ್ರಧಾರಿಗಳು ಅಲ್ಲಿನ ವಿಧ್ಯಾರ್ಥಿಗಳೆ ಆಗಿದ್ದರು. ಹೀಗೆ ಸತತ ೪ ವರ್ಷಗಳ ನಂತರ ಕಲ್ಲೂರಿ ಹೊರಬಂತು.
ಇಷ್ಟೆಲ್ಲ ಪುರಾಣ ಏನಕ್ಕೆ ಎಂದರೆ ಸಿನಿಮಾಕ್ಕೆ ಕಾಲ್ಪನಿಕ ಕತೆಗಳನ್ನು ಅನೇಕ ನಿರ್ದೇಶಕರು ಮಾರುಕಟ್ಟೆಯ ಹಿನ್ನಲೆಯಲ್ಲಿಯೆ ಹೆಣೆಯುತ್ತಾರೆ. ಅದರಲ್ಲೂ ನಗರ ಕೇಂದ್ರಿತ ಕತೆಗಳಿಗೆ ಹೆಚ್ಚು ಸ್ಥಾನ ನೀಡುವುದು ಮಾಮೂಲು. ಇದಕ್ಕೆ ವಿರುದ್ಧವಾಗಿ ಕಾಸರವಳ್ಳಿಯಂತವರು ಕಲಾತ್ಮಕ ಚಿತ್ರಗಳಿಗೆ ಮಾರುಹೋಗುತ್ತಾರೆ. ಇದನ್ನು ವಿಚಾರವಂತರು ಎನ್ನಿಸಿಕೊಂಡ ಮಂದಿ ಬಿಟ್ಟರೆ ಮತ್ಯಾರೂ ನೋಡುವುದಿಲ್ಲ ಎಂಬುದು ವ್ಯಂಗ್ಯ. ಕಮರ್ಷಿಯಲ್ ಚಿತ್ರಗಳು ಜನಸಾಮಾನ್ಯರ ಮನ್ನಣೆಗಳಿಸಿಕೊಳ್ಳುತ್ತವೆ. ಮಡಿವಂತರು ಇವುಗಳ ಕುರಿತು ಮೂಗು ಮುರಿದರು ಜನರ ಮೇಲೆ ಇವು ಬೀರುವ ಪ್ರಭಾವ ತೀವ್ರವಾದುದು. ಈ ಮಾತುಗಳನ್ನು ನಾನು ಕನ್ನಡ ಸಿನಿಮಾಲೋಕವನ್ನು ಗಮನದಲ್ಲಿಟ್ಟುಕೊಂಡು ಬರೆಯುತ್ತಿದ್ದೇನೆ.
ಇನ್ನು ಕಲ್ಲೂರಿಯ ವಿಚಾರ. ಶಕ್ತಿವೇಲು ತರದವರು ತಮ್ಮ ಸೊಗಡನ್ನು ಸಿನಿಮಾ ಎಂಬ ಜನಪ್ರಿಯ ಮಾದ್ಯಮದಲ್ಲಿ ತರಲು ಪ್ರಯತ್ನಿಸುವುದು ಒಂದು ಆಶಾದಾಯಕ ಬೆಳವಣಿಗೆ. ಕಲಾತ್ಮಕ ಚಿತ್ರಗಳಿಂದ ನಿಮಗೆ ಪ್ರಶಸ್ತಿಗಳು ಬರಬಹುದು ಅಥವಾ ಸೀಮಿತ ವಲಯಕ್ಕೆ ತಲುಪಬಹುದು. ಅದರೆ ಕಮರ್ಷಿಯಲ್ಲಿ ಮೋಡ್‌ನಲ್ಲಿಯೆ ಸಂವೇಧನಾಶೀಲ ನಿರೂಪಣೆಗಳು ಸಾಧ್ಯವಿರುವಾಗ ಇಂತಹ ಪ್ರಯತ್ನಗಳನ್ನು ಕಾಸರವಳ್ಳಿಯಂತವುರು ಯಾಕೆ ಮಾಡುವುದಿಲ್ಲವೋ ಗೊತ್ತಾಗುತ್ತಿಲ್ಲ.
ಕಲ್ಲೂರಿಯಲ್ಲಿ ಹಳ್ಳಿಗಾಡಿನ ಕಲಾ ಕಾಲೇಜೊಂದರಲ್ಲಿ ಮೂರು ವರ್ಷ ಇತಿಹಾಸ ಕಲಿಯುವ ಹುಡುಗರ ಚಿತ್ರಣವಿದೆ. ಅಲ್ಲಿನ ೯ ಜನ ಸ್ನೇಹಿತರ ನಡುವಿನ ಸಂಬಧಗಳು ಮತ್ತು ಸೂಕ್ಷ್ಮವಾಗಿರುವ ಪ್ರೇಮ ಭಾವನೆಗಳನ್ನು ಹೆಣೆಯಲಾಗಿದೆ. ಸಮಾಜದ ಅಸಮಾನತೆ, ಜಾತಿ ವ್ಯವಸ್ಥೆಗಳ ಕುರಿತು ಸೃಜನಶೀಲ ನಿರೂಪಣೆಯಿದೆ. ಕೊನೆಗೆ ತಮಿಳುನಾಡಿನಲ್ಲಿ ನಡೆದ ರಾಜಕೀಯ ದುರಂತವೊಂದಕ್ಕೆ ರಿಲೇಟ್ ಮಾಡಿ ಕತೆಯನ್ನು ಮುಗಿಸಲಾಗಿದೆ. ಮುಖ್ಯವಾಗಿ ಚಿತ್ರದ ಸಂಭಾಷಣೆ ಹಾಗೂ ಸಂಗೀತ ಕತೆಯ ಸೊಗಡಿಗೆ ಪೂರಕವಾಗಿವೆ. ಎಲ್ಲಿಯೂ ಅನಗತ್ಯ ಹೊಡೆದಾಟಗಳು, ಐಟಂ ಸಾಂಗ್‌ಗಳಿಲ್ಲದ ಸಿನಿಮಾ ಕಲಾತ್ಮಕತೆ ಎಂಬ ಸೋಗಿನಿಂದ ಹೊರಬಂದಿದೆ. ನಾನಿಲ್ಲಿ ನಿಮಗೆ ಕಲ್ಲೂರಿಯ ಕತೆಯನ್ನು ಹೇಳುವುದಿಲ್ಲ. ನೀವೊಮ್ಮೆ ಈ ಸಿನಿಮಾವನ್ನು ನೋಡಬೇಕು. ಚಿತ್ರ ಮುಗಿಯುವ ಹೊತ್ತಿಗೆ ನಿಮ್ಮ ಕಣ್ಣಂಚಿನಲ್ಲಿ ನೀರಿನ ಪೊರೆ ಕಟ್ಟದಿದ್ದರೆ ನನ್ನ ಮೇಲಾಣೆ...
ಕಳೆದ ಎರಡು ವರ್ಷಗಳಿಂದೀಚೆಗೆ ತಮಿಳಿನ ಮುಖ್ಯವಾಹಿನಿಯ ಸಿನಿಮಾದಲ್ಲಿ ಇಂತಹ ಪ್ರಯೋಗಳು ಆಗುತ್ತಿವೆ ಎಂಬುದನ್ನು ಗಮನಿಸಬೇಕು. ಜಾಗತೀಕರಣದ ಯುಗದಲ್ಲಿ ಮೂಲ ಸೊಗಡನ್ನು ಉಳಿಸುವ ಜೊತೆಗೆ ಸಮಾಜದ ಸ್ಥಿತಿಗತಿಗಳನ್ನು ನಿರೂಪಿಸಲು ಬಾಲಾಜಿಯಂತಹ ನಿರ್ದೇಶಕರುಗಳು ಶ್ರಮಿಸಿತ್ತಿರುವುದು ಗಮನಾರ್ಹ. ಮತ್ತೊಂದು ಸಿನಿಮಾ ಪೂ(ಹುವು) ಕೂಡ ಪಟಾಕಿ ಕಾರ್ಖಾನೆಯಲ್ಲಿ ದುಡಿಯುವ ಬಡ ಹುಡುಗಿಯ ಸುತ್ತ ನಿರ್ಮಾಣವಾದ ಪ್ರೇಮ ಕತೆ. ಅತೀ ಸೂಕ್ಷ್ಮವಾಗಿವ ಚಿತ್ರದ ಪ್ರತಿ ಪ್ರೇಂಗಳು ಇಂದಿನ ಕಮರ್ಷಿಯಲ್ಲಿ ಸಿನಿಮಾಗಳಲ್ಲಿ ನಿರೀಕ್ಷಿಸುವುದಕ್ಕಿಂತ ಭಿನ್ನವಾಗಿವೆ. ಸಾಧ್ಯವಾದರೆ ಇಂತಹ ಚಿತ್ರಗಳನ್ನೊಮ್ಮೆ ನೋಡಿ ನಂತರ ನಮ್ಮ ಕಲಾತ್ಮಕ ಚಿತ್ರಗಳನ್ನು ನೋಡಿ. ವ್ಯತ್ಯಾಸ ಮತ್ತು ಅಗತ್ಯ ಹೇಳುವುದಕ್ಕಿಂತ ನಿಮ್ಮ ಅನುಭವಕ್ಕೆ ಬರುತ್ತವೆ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

'ಕನಸಿನ ಎಡಿಟರ್'!

ಯುವ ಪತ್ರಕರ್ತನ 'ಕನಸಿನ ಎಡಿಟರ್' ಒಂದು ಸುಳಿವನ್ನೂ ಕೊಡದೆ ಕಣ್ಮರೆಯಾಗಿದ್ದಾರೆ! ಇ. ರಾಘವನ್ ಕೈಗೆ ಆಯುಧ ಕೊಟ್ಟು, ರಣ ಬಿಸಿಲಿನ ಮೈದಾನದ ನಡುವೆ, ಶತ್ರುವನ್ನು ಗುರಿಇಟ್ಟು ತೋರಿಸಿ, ಮರೆಯಲ್ಲಿ ನಿಂತು ಮುಗುಳ್ನುಗುತ್ತಿದ್ದ ಭಾವ ಹಠಾತ್ ಗೊಂದಲಕ್ಕೀಡಾಗಿದೆ. ಒಂದು ವರ್ಷಕ್ಕೂ ಕಡಿಮೆ ಅವಧಿಯ ಒಡನಾಟವನ್ನು ಈ ಹೊತ್ತಿಗೆ ವಿವರಿಸಲು ಪದಗಳು ಸಿಗುತ್ತಿಲ್ಲ. ತೊಟ್ಟು ಕಟ್ಟಿಸಿಕೊಂಡು, ಸುವಾಸನೆ ಬೀರುವ ಮಾಲೆ ರೂಪಹೊಂದಿ, ಮಾರುಕಟ್ಟೆಯ ಬಿಸಿಲಿನಲ್ಲಿ ನೀರು ಚಿಮುಕಿಸಿಕೊಂಡು, ಗಿರಾಕಿಯ ಆಗಮನಕ್ಕಾಗಿ ಕಾಯುತ್ತಿದ್ದ "ಅಕ್ಷರ"ಗಳನ್ನೂ ಗೌರವದಿಂದಲೇ ನೋಡಿಕೊಳ್ಳುತ್ತಿದ್ದ ಸಂಪಾದಕರೊಬ್ಬರ ಕುರಿತು ಮಾತುಗಳಿವು. ಇಷ್ಟೆಲ್ಲಾ ಇಲ್ಯಾಕೆ ಹೇಳಬೇಕಾಗಿದೆ ಎಂದರೆ ನಿನ್ನೆ(ಶನಿವಾರ) ನಂ.1 ಕನ್ನಡ ಪತ್ರಿಕೆಯ ಸಂಪಾದಕ ಎತಿರಾಜನ್ ರಾಘವನ್ ನಮ್ಮನ್ನಗಲಿದ್ದಾರೆ. ಅವರ ಕೆಳಗೆ ಕೆಲಸ ಮಾಡಿದ ಅನುಭವ ಇದೇ ಮೇ.18ಕ್ಕೆ ಒಂದು ವರ್ಷ ತುಂಬುತ್ತದೆ, ಅಷ್ಟೆ! ಅವರು ತೀರಿಕೊಂಡರು ಎಂಬ ಸುದ್ದಿ 'ಸ್ಫೋಟ'ವಾಗುವ ಹೊತ್ತಿಗೆ ನಾನು ಕಚೇರಿಯಲ್ಲಿದ್ದೆ. ಕಳೆದ ನೂರ ಎಪ್ಪತ್ತು ಚಿಲ್ಲರೆ ದಿನಗಳ ಹಿಂದೆ ಶುರುವಾದ 'ಯುವ ಗರ್ಜನೆ' ಎಂಬ ಪರಿಕಲ್ಪನೆಗೆ ದೊಡ್ಡ ಮೈಲಿಗಲ್ಲು ಸಿಕ್ಕ ದಿನ ಅದು. ಪ್ರಾದೇಶಿಕ ಭಾಷೆಯ ಪತ್ರಿಕೆಯೊಂದು ಕಾರ್ಪೋರೇಟ್ ಜಗತ್ತಿನ ವೇದಿಯಲ್ಲಿ ನಿಂತು ತಮ್ಮ ನಿಲುವನ್ನು ತಣ್ಣಗೆ ವಿವರಿಸಿದ ಸಮಯ ಕೂಡ. ಅದರ ವರದಿಗಾ...
ಮಂಗಳೂರು ಡೈರಿ! ಭಾಗ 1 ಜನವಾಹಿನಿಯ ಪಾಳು ಬಿದ್ದ ಬಂಗಲೆಯ ನೆರಳಿನಲ್ಲಿ.... ನಾನು ಎಂಟನೆ ತರಗತಿಯಲ್ಲಿದ್ದಾಗಿನ ನೆನಪು. ತೀರ್ಥಹಳ್ಳಿಯಲ್ಲಿ ನಾನಿದ್ದ ಹಾಸ್ಟೆಲ್ಲಿಗೆ ಜನವಾಹಿನಿ ಪತ್ರಿಕೆ ಬರುತ್ತಿತ್ತು. ಬೆಳಗ್ಗೆ ಆಗುತ್ತಲೆ ಪತ್ರಿಕೆಗಾಗಿ ಪೈಪೋಟಿ ನಡೆಸುತ್ತಿದ್ದೆವು. ಇದಕ್ಕಾಗಿ ಹಲವಾರು ಭಾರಿ ನಮ್ಮಲ್ಲಿ ಗಲಾಟೆಗಳು ಆಗಿದ್ದವು. ಅದೇಕೋ ಆವತ್ತು ಜನವಾಹಿನಿಯೊಂದಿಗೆ ಆರ್ಥವಾಗದ ಸಂದಂಧವೊಂದು ನಮ್ಮಂತ ಚಿಕ್ಕವಯಸ್ಸಿನ ಹುಡುಗರಿಗೆ ಬೆಳೆದಿತ್ತು. ಹಾಗೆಯೆ ಲಂಕೇಶ್ ಪತ್ರಿಕೆ ಕೂಡ ಅದರಲ್ಲಿ ಬರುತ್ತಿದ್ದ ತುಂಟಾಟಕ್ಕಾಗಿ ಓದುತ್ತಿದ್ದೆವು!. ಇವೆಲ್ಲವೂ ಹಳೆಯ ದಿನಗಳು, ಮಾಸಿದ ನೆನಪುಗಳು. ಸಹಜವಾಗಿಯೆ ನಾನು ಸಾಹಿತ್ಯದ ಬಗ್ಗೆ ಬೆಳೆಸಿ ಕೊಂಡಿದ್ದ ಆಸಕ್ತಿ, ನನ್ನಲ್ಲಿ ಹಲವು ಆಲೋಚನೆಗಳನ್ನು ಹುಟ್ಟುಹಾಕಿತು. ಹೊಸ ಪ್ರಪಂಚವೊಂದನ್ನು ಕಂಡ ಆನುಭವ. ಮಲೆನಾಡಿನಲ್ಲಿಯೆ ಹುಟ್ಟಿ ಬೆಳೆದು ಆಲ್ಲಿನ ಪರಿಸರದ ಜೊತೆ ಹೊಂದಿದ ಸಂಬಂಧವೊಂದು ಕಳಚಿಕೊಂಡದ್ದು ಚಳುವಳಿ ಹೋರಾಟ ಅಂತ ಬೀದಿಗೆ ಬಿದ್ದ ಮೇಲೆಯೆ. ಅಲ್ಲಿಯವರೆಗಿದ್ದ ಊರಲ್ಲಿ ಶಿಕಾರಿ ಹುಚ್ಚು, ಕಾಡು ಸುತ್ತುವ ಗೀಳುಗಳು ವೈಚಾರಿಕತೆ ಎಂಬ ಸೋಗಿನಲ್ಲಿ ಪೇವಲವಾಗಿ ಕಂಡಿದ್ದವು. ಜನವಾಹಿನಿ ನಂತರ ಇಷ್ಟವಾಗಿದ್ದು ಆದು ಪ್ರಗತಿಪರ ವಿಚಾರಗಳನ್ನು ಪ್ರತಿಪಾದಿಸುವ ಪತ್ರಿಕೆ ಎಂಬ ಕಾರಣಕ್ಕೆ. ಹಾಗಂತ ನಾನು ನಂಬಿಕೊಂಡಿದ್ದೆ. ಆಷ್ಟರಲ್ಲಾಗಲೆ ಅದು ತನ್ನ ಆಂತರಿಕ ಜಗಳಗಳಿಂದಾಗಿ ಮುಚ್ಚಿಹೋಗುತ್ತು. ಹಾಸ್ಟೆಲ್ಲಿಗೆ ಈ...