ವಿಷಯಕ್ಕೆ ಹೋಗಿ
ಮಂಗಳೂರು ಡೈರಿ. ಭಾಗ-೨

ಸಕತ್ ಹಾಟ್ ಮಗಾ..!

ಸಧ್ಯ ಮಂಗಳೂರಿನಲ್ಲಿ ಬಿಸಿಲು ಹೆಚ್ಚಾಗುತ್ತಿದೆ. ನಾನು ಇಲ್ಲಿಗೆ ಬಂದ ಸಮಯದಲ್ಲಿ ಜಡಿ ಮಳೆ ಗುಡಿಸಿಹಾಕುತ್ತಿತ್ತು. ಈಗ ಮಳೆ ಸ್ವಲ್ಪ ಕಡಿಮೆಯಾದ ಕಾರಣಕ್ಕೇನೋ ಬಿಸಿಲಿನ ತಾಪ ಹೆಚ್ಚುತ್ತಿರುವುದು ಬೆನ್ನಲ್ಲಿ ಮೂಡುತ್ತಿರುವ ಬೆವರಿನ ಸಾಲುಗಳು ತಿಳಿಸುತ್ತಿವೆ.
ನನ್ನ ಜೊತೆಯಲ್ಲಿ ಕೆಲಸ ಮಾಡುತ್ತಿರುವ ಇಲ್ಲಿನ ಸ್ಥಳೀಯರು, ‘ನೀವು ಬೇಸಿಗೆಯಲ್ಲಿ ಇಲ್ಲಿರಬೇಕು. ಆಗ ಬಿಸಿಲು ಎಂದರೆ ಏನು ಎಂದು ಗೊತ್ತಾಗುತ್ತದೆ’ ಎಂದು ಬೆದರಿಸುತ್ತಿದ್ದಾರೆ. ನಾನು ಕೆಲಸ ಮಾಡುವ ಪತ್ರಿಕಾ ಕಚೇರಿ ಮಂಗಳೂರಿನ ಇಂಡಸ್ಟ್ರಿಯಲ್ ಏರಿಯಾದಲ್ಲಿರುವುದರಿಂದ ಇಲ್ಲಿ ದಿನನಿತ್ಯ ಬಿಸಿಲಲ್ಲಿ ದುಡಿಯುವ ಕಾರ್ಮಿಕರ ಸಮೂಹವೇ ಕಾಣುತ್ತದೆ. ಮಾಸಲು ಬಟ್ಟೆಯ, ಸಾಧಾರಣ ಉಡುಗೆಯ ಸ್ವಲ್ಪ ಕಂದು ಬಣ್ಣದ ವ್ಯಕ್ತಿತ್ವಗಳು. ನಾನಾದರೂ ಆಫೀಸಿನ -ನಿನ ಕೆಳಗೆ ಕುಳಿತು ಕೆಲಸ ಮಾಡುವುದು, ಇವರಂತೆ ಬಿಸಿಲಿನಲ್ಲಿ ದುಡಿಯುತ್ತಿಲ್ಲವಲ್ಲ ಎಂಬ ಸಮಾದಾನವನ್ನು ನನಗೆ ನಾನೇ ಹೇಳಿಕೊಳ್ಳುತ್ತೇನೆ.

ಮಂಗಳೂರೆಂದರೆ ಘಟ್ಟದ ಕೆಳಗಿನ ಊರು, ಸಮುದ್ರ ಅಂತೆಲ್ಲ ಕಲ್ಪನೆಗಳಿದ್ದವು ಅಷ್ಟೆ. ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿ ಓದುವಾಗ ಘಟ್ಟದ ಕೆಳಗಿನ ಕೂಲಿಯಾಳುಗಳ ಚಿತ್ರಣ ಬರುತ್ತದೆ. ಆದರೆ ಇವತ್ತು ಮಂಗಳೂರು ಎಂದರೆ ದುಬೈ ದುಡ್ಡಿನಿಂದ ಶ್ರ್ರೀಮಂತವಾದ ಪ್ರದೇಶ ಎಂದು ಸ್ನೇಹಿತರು ಹೇಳುತ್ತಾರೆ. ಆದರೆ ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ದಿನನಿತ್ಯ ಕಾಣುವ ಜೀವಗಳು ಸ್ನೇಹಿತರ ಮಾತುಗಳನ್ನು ಅಣಕಿಸುತ್ತಿದ್ದಾರೆ.

ಇನ್ನೆಷ್ಟು ದಿನ ಇಲ್ಲಿ ಕಾಲ ಹಾಕಬೇಕೊ ಗೊತ್ತಿಲ್ಲ. ಆದರೆ ಇಲ್ಲಿನ ಪತ್ರಿಕೆಗಳನ್ನು ಓದುವ ಶಿಕ್ಷೆ ಮಾತ್ರ ತಪ್ಪದ್ದಲ್ಲ ಎಂಬುದು ಮೊದಲಿನ ದಿನವೇ ಗಮನಕ್ಕೆ ಬಂತು. ಇಲ್ಲಿನ ಸ್ಥಳೀಯ ಪತ್ರಿಕೆಗಳ ಮುಖಪುಟವೆಲ್ಲ ಕೆಂಪು ಕೆಂಪು..! ಎಂತಹ -ಟೋಗಳನ್ನು ಅಚ್ಚುಹಾಕುತ್ತಾರೆ ಎಂದರೆ, ರಾತ್ರಿ ನೋಡಿ ಮಲಗಿದರೆ ಕೆಟ್ಟ ಕನಸು ಬೀಳುವುದು ಖಂಡಿತ. ಬರೀ ಕೊಲೆ, ಅಪಘಾತದ ಕ್ರೈಂ ಸುದ್ಧಿಗಳೇ.
ನಿಮಗೆ ತಿಗಣೆಗಳ ಗೊತ್ತಿರಬೇಕು. ಬಿಸಿಲು ಹೆಚ್ಚಾಗಿರು ಕಡೆಗಳಲ್ಲಿ ಈ ಬೆಡ್ ಬಗ್ಸ್‌ಗಳದ್ದು ವಿಪರೀತ ಕಾಟ. ನನಗೆ ಇವು ಕೊಟ್ಟ ಕಾಟಕ್ಕೆ ಒಮ್ಮೆ ತಿಗಿಣೆಗಳ ಕುರಿತು ಸಂಶೋಧನೆ ಮಾಡಬೇಕು ಅಂದುಕೊಂಡಿದ್ದು ಇದೆ. ಅಂತರ್‌ಜಾಲದಲ್ಲಿ ಕೆಲವು ವಿಚಿತ್ರ ಮಾಹಿತಿಗಲು ಸಿಗುತ್ತವಾದರೂ ತಿಗಣೆಗಳಿಂದ ನನಗಾದ ಅನುಭವಕ್ಕೆ ಹತ್ತಿರವಾದ ವಿಚಾರಗಲು ಸಿಗಲಿಲ್ಲ. ನಮ್ಮಮ್ಮ ತಿಗಣೆಗಳ ವಿಚಾರದಲ್ಲಿ ಸ್ವಾರಸ್ಯಕರವಾಗಿ ಮಾತನಾಡುತ್ತಾರೆ. ನಮ್ಮ ಮಲೆನಾಡಿನಲ್ಲಿ ಹಿಂದೆ ಈಚಲು ಚಾಪೆಗಳನ್ನು ಬಳಸುತ್ತಿದ್ದರಂತೆ. ಅದರಲ್ಲೂ ಬಾಣಂತನದ ಸಮಯದಲ್ಲಿ ಹೆಂಗಸರಿಗೆ ತಿಗಣೆಗಳಿಂದ ರಕ್ಷಣೆ ನೀಡುವುದೇ ಹರಸಾಹಸವಾಗಿತ್ತಂತೆ. ಮಳೆಗಾಲದಲ್ಲಿ ಬಾಣಂತನ ಮಾಡುವುದೇ ಇಂದು ಕಷ್ಟವಾದರೆ ಈ ತಿಗಣೆಗಳನ್ನು ನಾಶಪಮಾಡುವುದು ಮತಂದು ಕಷ್ಡದ ವಿಚಾರವಾಗಿತ್ತಂತೆ. ಮನೆಯ ಗೋಡೆಗಳೆಲ್ಲ ತಿಗಣೆಗಳನ್ನು ಒರೆದ ಕಲೆಗಲಿಂದ ಕೆಂಪಾಗಿ ಎಲೆ ಅಡಿಕೆ ಎಂಜಲನ್ನು ಉಗಿದ ಹಾಗೆ ಆಗಿರುತ್ತಿತ್ತು ಎಂದು ಅಮ್ಮ ನೆನಪಿಸಿಕೊಳ್ಳುತ್ತಿದ್ದರು.

ಈ ತಿಗಣೆಗಳ ಕುರಿತು ಇನ್ನು ಸ್ವಾರಸ್ಯಕರ ಸ್ವ ಅನುಭವಗಳಿವೆ. ಅದನ್ನೆಲ್ಲಾ ಮುಂದೆ ಎಂದಾದರೂ ಬರೆಯುತ್ತೇನೆ. ಇಲ್ಲಿ ತಿಗಣೆಗಳ ವಿಚಾರ ಯಾಕೆ ಬಂತು ಎಂದರೆ ಈಗ ಮಂಗಳೂರಿನಲ್ಲಿ ವಿಪರೀತ ತಿಗಣೆಕಾಟ. ನಾನಿರುವ ಆಫೀಸಿನಲ್ಲಿ ಎಲ್ಲರೂ ಒಗ್ಗಿಹೋಗಿದ್ದಾರೆ. ಹಾಗಾಗಿ ದಿನನಿತ್ಯ ಲೀಟರ್‌ಗಟ್ಟಲೆ ರಕ್ತದಾನ ನಡೆಯುತ್ತಿದೆ. ಹಾಗೆಯೆ ಮುಂದುವರಿಯಲಿ ಎಂದು ಆಶಿಸುತ್ತಾ...

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

'ಕನಸಿನ ಎಡಿಟರ್'!

ಯುವ ಪತ್ರಕರ್ತನ 'ಕನಸಿನ ಎಡಿಟರ್' ಒಂದು ಸುಳಿವನ್ನೂ ಕೊಡದೆ ಕಣ್ಮರೆಯಾಗಿದ್ದಾರೆ! ಇ. ರಾಘವನ್ ಕೈಗೆ ಆಯುಧ ಕೊಟ್ಟು, ರಣ ಬಿಸಿಲಿನ ಮೈದಾನದ ನಡುವೆ, ಶತ್ರುವನ್ನು ಗುರಿಇಟ್ಟು ತೋರಿಸಿ, ಮರೆಯಲ್ಲಿ ನಿಂತು ಮುಗುಳ್ನುಗುತ್ತಿದ್ದ ಭಾವ ಹಠಾತ್ ಗೊಂದಲಕ್ಕೀಡಾಗಿದೆ. ಒಂದು ವರ್ಷಕ್ಕೂ ಕಡಿಮೆ ಅವಧಿಯ ಒಡನಾಟವನ್ನು ಈ ಹೊತ್ತಿಗೆ ವಿವರಿಸಲು ಪದಗಳು ಸಿಗುತ್ತಿಲ್ಲ. ತೊಟ್ಟು ಕಟ್ಟಿಸಿಕೊಂಡು, ಸುವಾಸನೆ ಬೀರುವ ಮಾಲೆ ರೂಪಹೊಂದಿ, ಮಾರುಕಟ್ಟೆಯ ಬಿಸಿಲಿನಲ್ಲಿ ನೀರು ಚಿಮುಕಿಸಿಕೊಂಡು, ಗಿರಾಕಿಯ ಆಗಮನಕ್ಕಾಗಿ ಕಾಯುತ್ತಿದ್ದ "ಅಕ್ಷರ"ಗಳನ್ನೂ ಗೌರವದಿಂದಲೇ ನೋಡಿಕೊಳ್ಳುತ್ತಿದ್ದ ಸಂಪಾದಕರೊಬ್ಬರ ಕುರಿತು ಮಾತುಗಳಿವು. ಇಷ್ಟೆಲ್ಲಾ ಇಲ್ಯಾಕೆ ಹೇಳಬೇಕಾಗಿದೆ ಎಂದರೆ ನಿನ್ನೆ(ಶನಿವಾರ) ನಂ.1 ಕನ್ನಡ ಪತ್ರಿಕೆಯ ಸಂಪಾದಕ ಎತಿರಾಜನ್ ರಾಘವನ್ ನಮ್ಮನ್ನಗಲಿದ್ದಾರೆ. ಅವರ ಕೆಳಗೆ ಕೆಲಸ ಮಾಡಿದ ಅನುಭವ ಇದೇ ಮೇ.18ಕ್ಕೆ ಒಂದು ವರ್ಷ ತುಂಬುತ್ತದೆ, ಅಷ್ಟೆ! ಅವರು ತೀರಿಕೊಂಡರು ಎಂಬ ಸುದ್ದಿ 'ಸ್ಫೋಟ'ವಾಗುವ ಹೊತ್ತಿಗೆ ನಾನು ಕಚೇರಿಯಲ್ಲಿದ್ದೆ. ಕಳೆದ ನೂರ ಎಪ್ಪತ್ತು ಚಿಲ್ಲರೆ ದಿನಗಳ ಹಿಂದೆ ಶುರುವಾದ 'ಯುವ ಗರ್ಜನೆ' ಎಂಬ ಪರಿಕಲ್ಪನೆಗೆ ದೊಡ್ಡ ಮೈಲಿಗಲ್ಲು ಸಿಕ್ಕ ದಿನ ಅದು. ಪ್ರಾದೇಶಿಕ ಭಾಷೆಯ ಪತ್ರಿಕೆಯೊಂದು ಕಾರ್ಪೋರೇಟ್ ಜಗತ್ತಿನ ವೇದಿಯಲ್ಲಿ ನಿಂತು ತಮ್ಮ ನಿಲುವನ್ನು ತಣ್ಣಗೆ ವಿವರಿಸಿದ ಸಮಯ ಕೂಡ. ಅದರ ವರದಿಗಾ...
ಮಂಗಳೂರು ಡೈರಿ! ಭಾಗ 1 ಜನವಾಹಿನಿಯ ಪಾಳು ಬಿದ್ದ ಬಂಗಲೆಯ ನೆರಳಿನಲ್ಲಿ.... ನಾನು ಎಂಟನೆ ತರಗತಿಯಲ್ಲಿದ್ದಾಗಿನ ನೆನಪು. ತೀರ್ಥಹಳ್ಳಿಯಲ್ಲಿ ನಾನಿದ್ದ ಹಾಸ್ಟೆಲ್ಲಿಗೆ ಜನವಾಹಿನಿ ಪತ್ರಿಕೆ ಬರುತ್ತಿತ್ತು. ಬೆಳಗ್ಗೆ ಆಗುತ್ತಲೆ ಪತ್ರಿಕೆಗಾಗಿ ಪೈಪೋಟಿ ನಡೆಸುತ್ತಿದ್ದೆವು. ಇದಕ್ಕಾಗಿ ಹಲವಾರು ಭಾರಿ ನಮ್ಮಲ್ಲಿ ಗಲಾಟೆಗಳು ಆಗಿದ್ದವು. ಅದೇಕೋ ಆವತ್ತು ಜನವಾಹಿನಿಯೊಂದಿಗೆ ಆರ್ಥವಾಗದ ಸಂದಂಧವೊಂದು ನಮ್ಮಂತ ಚಿಕ್ಕವಯಸ್ಸಿನ ಹುಡುಗರಿಗೆ ಬೆಳೆದಿತ್ತು. ಹಾಗೆಯೆ ಲಂಕೇಶ್ ಪತ್ರಿಕೆ ಕೂಡ ಅದರಲ್ಲಿ ಬರುತ್ತಿದ್ದ ತುಂಟಾಟಕ್ಕಾಗಿ ಓದುತ್ತಿದ್ದೆವು!. ಇವೆಲ್ಲವೂ ಹಳೆಯ ದಿನಗಳು, ಮಾಸಿದ ನೆನಪುಗಳು. ಸಹಜವಾಗಿಯೆ ನಾನು ಸಾಹಿತ್ಯದ ಬಗ್ಗೆ ಬೆಳೆಸಿ ಕೊಂಡಿದ್ದ ಆಸಕ್ತಿ, ನನ್ನಲ್ಲಿ ಹಲವು ಆಲೋಚನೆಗಳನ್ನು ಹುಟ್ಟುಹಾಕಿತು. ಹೊಸ ಪ್ರಪಂಚವೊಂದನ್ನು ಕಂಡ ಆನುಭವ. ಮಲೆನಾಡಿನಲ್ಲಿಯೆ ಹುಟ್ಟಿ ಬೆಳೆದು ಆಲ್ಲಿನ ಪರಿಸರದ ಜೊತೆ ಹೊಂದಿದ ಸಂಬಂಧವೊಂದು ಕಳಚಿಕೊಂಡದ್ದು ಚಳುವಳಿ ಹೋರಾಟ ಅಂತ ಬೀದಿಗೆ ಬಿದ್ದ ಮೇಲೆಯೆ. ಅಲ್ಲಿಯವರೆಗಿದ್ದ ಊರಲ್ಲಿ ಶಿಕಾರಿ ಹುಚ್ಚು, ಕಾಡು ಸುತ್ತುವ ಗೀಳುಗಳು ವೈಚಾರಿಕತೆ ಎಂಬ ಸೋಗಿನಲ್ಲಿ ಪೇವಲವಾಗಿ ಕಂಡಿದ್ದವು. ಜನವಾಹಿನಿ ನಂತರ ಇಷ್ಟವಾಗಿದ್ದು ಆದು ಪ್ರಗತಿಪರ ವಿಚಾರಗಳನ್ನು ಪ್ರತಿಪಾದಿಸುವ ಪತ್ರಿಕೆ ಎಂಬ ಕಾರಣಕ್ಕೆ. ಹಾಗಂತ ನಾನು ನಂಬಿಕೊಂಡಿದ್ದೆ. ಆಷ್ಟರಲ್ಲಾಗಲೆ ಅದು ತನ್ನ ಆಂತರಿಕ ಜಗಳಗಳಿಂದಾಗಿ ಮುಚ್ಚಿಹೋಗುತ್ತು. ಹಾಸ್ಟೆಲ್ಲಿಗೆ ಈ...
ಕಲ್ಲೂರಿ ಎಂಬ ಸಿನಿಮಾ ನೋಡಿದ್ದೀರಾ...? ಪ್ರಶಾಂತ್ ಹುಲ್ಕೋಡು ಸಿನಿಮಾ ಹೇಗಿರಬೇಕು ಎಂದು ನಿರ್ದಿಷ್ಟವಾಗಿ ಹೇಳುವದು ಕಷ್ಟ. ಆದರೆ ಒಳ್ಳೆಯ ಸಿನಿಮಾ ನೋಡುಗನ್ನು ತನ್ನಲ್ಲಿ ಒಂದು ಪಾತ್ರವಾಗಿಸುತ್ತದೆ ಅನ್ನುತ್ತಾರೆ. ಹಾಗಾಗಿಯೆ ಬಾಲಿವುಡ್ ಮಂದಿ ರಿಯಲ್ ಸ್ಟೋರಿಗಳನ್ನು ರೀಲ್‌ನಲ್ಲಿ ತರಲು ಹೆಚ್ಚು ಶ್ರಮವಹಿಸುತ್ತಾರೆ. ಬಾಲಿವುಡ್‌ನಲ್ಲಿಯೂ ಆಂತಹ ಪ್ರಯೋಗಗಳಾಗುತ್ತಿವೆ. ಬದುಕಿಗೆ ಹತ್ತಿರವೆನಿಸುವ ಕತೆಗಳನ್ನು ತೆರೆಗೆ ಅಳವಡಿಸುವುದು ಸುಲಭದ ಕೆಲಸವಲ್ಲ. ಅದಕ್ಕೆ ತನ್ನದೆ ಆದ ಕಮಿಟ್‌ಮೆಂಟ್, ಡೆಡಿಕೇಶನ್ ಇರಬೇಕಾಗುತ್ತದೆ. ಚಿತ್ರದ ನಿರ್ದೇಶಕನಿಗೆ ಅಂತಹ ಸಂವೇದನೆ ಇರದಿದ್ದರೆ ಇಡೀ ಚಿತ್ರ ಹಾಳಾಗಿಬಿಡುತ್ತದೆ. ಈ ಮಾತಿಗೆ ವಿರುದ್ಧವಾಗಿ ಇತ್ತೀಚೆಗೆ ಬಂದ ತಮಿಳಿನ ಕಲ್ಲೂರಿ ಉತ್ತಮ ಉದಾಹರಣೆ. ಈ ಚಿತ್ರದ ಕುರಿತು ಹೇಳುವ ಮುನ್ನ ನಿಮಗೆ ಇದನ್ನು ತೆರೆಗೆ ತಂದ ನಿರ್ದೇಶಕನ ಶ್ರಮದ ಕುರಿತು ಹೇಳಬೇಕು. ಅದು ಕಲ್ಲೂರಿಗಿಂತ ಲೂ ಇಂಟೆರಿಸ್ಟಿಂಗ್. ತಮಿಳಿನ ಪ್ರಸಿದ್ಧ ಚಿತ್ರ ಕಾದಲ್ ನೆನಪಿರಬೇಕು ನಿಮಗೆ. ಅಂತರಜಾತಿ ಪ್ರೇಮ ಕತೆಯನ್ನು ಅದ್ಭುತವಾಗಿ ನಿರೂಪಿಸಿದ ಚಿತ್ರ. ಅದರ ನಿರ್ದೇಶಕ ಬಾಲಾಜಿ ಶಕ್ತಿವೇಲು ಕಾದಲ್ ನಂತರ ನಿರ್ದೇಶಿಸಿದ ಚಿತ್ರವೇ ಕಲ್ಲೂರಿ. ತಮಿಳಿನಲ್ಲಿ ಕಲ್ಲೂರಿ ಎಂದರೆ ಕಾಲೇಜು ಎಂದರ್ಥ. ಕಾದಲ್ ಸೂಪರ್ ಹಿಟ್ ಆದ ನಂತರ ಬಾಲಾಜಿ ಶಕ್ತಿವೇಲು ಮುಂದೆ ನಿರ್ಮಾಪಕರ ದಂಡೇ ನೆರೆದಿತ್ತಂತೆ. ಆದರೆ ಈ ಮಹಾಶಯ ಯಾವುದನ್ನು ಒಪ್ಪಿಕೊಳ್ಳದೆ ಆರ್ಥಿಕ...