ವಿಷಯಕ್ಕೆ ಹೋಗಿ
ಮುಂಜಾನೆ ಹೊತ್ತಲ್ಲಿ ಸಂಭವಿಸಿದ ಎರಡು ಆತ್ಮಹತ್ಯೆಗಳ ಕುರಿತು

ಪ್ರಶಾಂತ್ ಹುಲ್ಕೋಡು

ಮೇ.೨೩, ೨೦೦೯ ಹಾಗೂ ಜು.೨೩, ೨೦೦೯. ಈ ಎರಡು ದಿನಗಳ ಮುಂಜಾವು ಆರಂಭಗೊಂಡಿದ್ದು ಆತ್ಮಹತ್ಯೆಗಳ ಮೂಲಕ !
ದಕ್ಷಿಣ ಕೊರಿಯಾದಲ್ಲಿ ಮೇ.೨೩ರಂದು ಮುಂಜಾವು ಆಗಷ್ಟೇ ಬಿಚ್ಚಿಕೊಳ್ಳುತ್ತಿತ್ತು. ದೇಶದ ಮಾಜಿ ಅಧ್ಯಕ್ಷ ರೋ ಮೊ ಯುನ್ ನೋಡಿದ ಕೊನೆಯ ಬೆಳಗಿನ ಜಾವವದು. ಮಿಲಿಯಾಂತರ ಡಾಲರ್‌ಗಳ ಹಗರಣದಲ್ಲಿ ವಿಚಾರಣೆಗೆ ಒಳಗಾಗಿದ್ದರೋ ವಿಪರೀತ ಪಾಪಪ್ರeಯಿಂದ ನರಳುತ್ತಿದ್ದರು. ಅವರಿಗೆ ತಾನು ಆಳಿದ ಜನರ ಎದುರಿಗೆ ಮುಖ ತೋರಿಸುವುದೇ ಅವಮಾನಕರ ಎಂಬ ಭಾವನೆ ಮೂಡಿ ಬಹಳ ದಿನಗಳೇ ಆಗಿದ್ದವು. ಅದೇನನ್ನಿಸಿತೋ ಏನೋ ರೋ ತಮ್ಮ ಆತ್ಮಹತ್ಯೆಗೆ ಅಂತಹದೊಂದು ಮುಂಜಾವನ್ನು ಆಯ್ದುಕೊಂಡರು. ತಮ್ಮ ಮನೆಯ ಹಿಂಬದಿಯ ಬೆಟ್ಟದ ಸಾಲುಗಳ ಮೇಲಿಂದ ಒಂದೇ ನೆಗೆತ. ರೋ ಇತಿಹಾಸವಾಗಿ ಹೋದರು.

ಇಂತಹುದೆ ಒಂದು ಮುಂಜಾವುಗೆ ಬೆಂಗಳೂರು ತೆರೆದುಕೊಂಡಿದ್ದು ಜುಲೈ ೨೩ರಂದು. ಬಿಬಿ‌ಎಂಪಿಯ ಸಹಾಯಕ ಆಯುಕ್ತ ಲಕ್ಷ್ಮಣ್ ಬೆಳಗ್ಗೆ ವಾಕಿಂಗ್ ಎಂದು ಬನಶಂಕರಿಯ ತಮ್ಮ ಮನೆಯಿಂದ ಹೊರಟವರು ಸೀದಾ ತಮ್ಮ ಕಚೇರಿ ತಲುಪಿದರು. ಅದೇನು ಯೋಚಿಸಿದರೊ, ಜನರಿಗೆ ಮುಖ ತೋರಿಸಲು ಹಿಂಸೆಯಾಗುತ್ತಿದೆ ಎಂದು ಪತ್ರಬರೆದಿಟ್ಟ ಲಕ್ಷಣ್ ನೇಣು ಬಿಗಿದುಕೊಂಡರು. ಇವರು ಮಾರ್ಚ್ ೧೮ರಂದು ಲೋಕಾಯುಕ್ತ ದಾಳಿಗೆ ಒಳಗಾಗಿದ್ದರು. ಅವರ ಮೇಲೂ ಕೋಟಿ ರೂಪಾಯಿ ಲಂಚದ ಆರೋಪವಿತ್ತು.
ಮೇಲ್ನೋಟಕ್ಕೆ ಈ ಎರಡು ಸಾವುಗಳು ಪ್ರಪಂಚದಲ್ಲಿ ದಿನನಿತ್ಯ ಸಂಭವಿಸುವ ಅಸಂಖ್ಯಾತ ಸಾವುಗಳ ಹಾಗೆ ಕಾಣಿಸಿದರು, ಸಾರ್ವಜನಿಕ ಜೀವನದಲ್ಲಿ ಮಾಡಿದ ತಪ್ಪಿಗಾಗಿ ತಮ್ಮನ್ನು ತಾವು ಶಿಕ್ಷಿಸಿಕೊಂಡ ಅಪರೂಪದ ಘಟನೆಗಳಾಗಿವೆ. ಇಬ್ಬರೂ ಸಾಯುವ ಮುನ್ನ ಪತ್ರ ಬರೆದಿಟ್ಟಿದ್ದಾರೆ. ತಮ್ಮ ಮೇಲಿನ ಆರೋಪಗಳಿಂದ ಸಮಾಜದಲ್ಲಿ ಮುಖ ತೋರಿಸಲಾಗದ ಮನಸ್ಥಿತಿ ಇಬ್ಬರಲ್ಲೂ ವ್ಯಕ್ತವಾಗಿದೆ. ಸಾರ್ವಜನಿಕ ಜೀವನದಲ್ಲಿ ಆರೋಪಗಳಿಲ್ಲದೆ ಬದುಕುತ್ತಿರುವವರನ್ನು ದುರ್ಬೀನು ಹಾಕಿ ಹುಡಕಬೇಕು, ಹಾಗಿದೆ ಇವತ್ತಿನ ಪರಿಸ್ಥಿತಿ. ಇವರಿಬ್ಬರು ತೆಗೆದುಕೊಂಡ ತೀರ್ಮಾನವನ್ನು ಎಲ್ಲಾ ರಾಜಕಾರಣಿಗಳು, ರಾಜಕೀಯ ನಾಯಕರೂ ತೆಗೆದುಕೊಳ್ಳಬೇಕು. ಆದರೆ ಇವರಲ್ಲಿದ್ದ ಮರ್ಯಾದೆ ಅಂಜುವ ಗುಣ ಇಲ್ಲದಿರುವುದರಿಂದ ಪುಣ್ಯ ಅವರೆಲ್ಲ ಬದುಕಿದ್ದಾರೆ ಎನ್ನಿಸುತ್ತದೆ.

೧೦ನೆ ತರಗತಿಯಲ್ಲಿ -ಲಾದೆ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಯೊಬ್ಬ ಸಮಾಜಕ್ಕೆ ಅಂಜಿಯೆ ಈ ನಿರ್ಧಾರಕ್ಕೆ ಬಂದಿರುತ್ತಾನೆ. ಅಂತವರಿಗೆ ಮಾರ್ಯಾದೆ ಕಳೆದುಹೋಯಿತು ಎಂಬುದೆ ಜೀವನಕ್ಕೆ ಕೊನೆಹಾಡಲು ಪ್ರೇರಣೆಯಾಗುತ್ತದೆ.

ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ರೋ ಹಾಗೂ ಲಕ್ಷಣ್‌ಗೆ ತಮ್ಮ ಮೇಲಿನ ಆರೊಪಗಳನ್ನು ತಾಂತ್ರಿಕವಾಗಿ ನಿವಾರಿಸಿಕೊಳ್ಳುವ ಅವಕಾಶವನ್ನು ಈ ವ್ಯವಸ್ಥೆ ದಯಪಾಲಿಸುತ್ತಿತ್ತೇನೋ, ಆದರೆ ಕಳೆದು ಹೋದ ಮಾನವನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂಬುದು ಇಬ್ಬರಿಗೂ ಅರ್ಥವಾಗಿತ್ತು ಎನ್ನಿಸುತ್ತದೆ. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಎಂಬ ಗಾದೆ ಮಾತಿದೆ. ಆದರೆ ಮಾನಕ್ಕೆ ಅಂಜದಿದ್ದರೆ ಮಾತ್ರ ನೈತಿಕತೆ ಕಳೆದುಕೊಂಡೂ ಬದುಕಬಹುದು ಎಂಬುದಕ್ಕೆ ನಮ್ಮಲ್ಲಿ ಅನೇಕ ಉದಾಹರಣೆಗಳಿವೆ. ಉದಾಹರಣೆಗೆ ಎಲ್ಲಾ ರಾಜಕೀಯ ಧುರೀಣರು, ಇತ್ಯಾದಿ.

ಹಾಗಾಗಿಯೆ ಇಂತಹ ಸಾವುಗಳು ಮುಖ್ಯವಾಗುತ್ತವೆ. ಮೂರು ಬಿಟ್ಟು ನಿಂತವರ ಎದುರಿಗೆ ಯಾವುದನ್ನೂ ಬಿಡಲಾಗಾದೆ ಹಾಗಂತ ಲೋಭದ ಜೀವನವನ್ನು ತ್ಯಜಿಸದೆ, ವ್ಯಸಸ್ಥೆಯೆ ದಯಪಾಲಿಸಿರುವ ಭ್ರಚ್ಟಾಚಾರದ ಮಾರ್ಗಗಳನ್ನು ಆಯ್ದುಕೊಂಡು ಬದುಕುವ ಲಕ್ಷ್ಮಣ್‌ರಂತವರಿಗೆ ಆತ್ಮಹತ್ಯೆಯಲ್ಲದೆ ಬೇರೆ ದಾರಿ ಇರುವುದಿಲ್ಲ. ಸತ್ತವರ ಕುರಿತು ಕಟುವಾಗಿ ಮಾತನಾಡಬಾರದು ಅಂತಾರೆ. ಆದರೆ ಪ್ರಲೋಭನೆಯ ಬದುಕಿನಲ್ಲಿ ನೈತಿಕತೆಯನ್ನು ಉಳಿಸಿಕೊಳ್ಳಬೇಕೆಂಬ ಹಂಬಲವಿರುವವರು ತಮ್ಮ ಚಾರಿತ್ರ್ಯವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಒಂದಲ್ಲಾ ಒಂದು ದಿನ ಇಂತಹ ಸವಾಲುಗಳಗೆ ತಲೆಬಾಗಲೇ ಬೇಕಾಗುತ್ತದೆ. ಎಷ್ಟಾದರೂ ಪುಸ್ತಕದ ಕಾನೂನಿಗಿಂತ ಸಮಾಜದ ಕಾನುನು ದೊಡ್ಡದು. ಅದಕ್ಕೆ ತಲೆಬಾಗುವ ಸ್ಥಿತಿ ನೈತಿಕತೆಯನ್ನು ಕಾಲೆದುಕೊಂಡವರಿಗೆ ಬರಲಿ ಎಂದು ಆಶಿಸುತ್ತ ಇಬ್ಬರ ಸಾವಿಗೆ ಈ ಒಂದು ನಿಮಿಷಗಳ ಮೌನಾಚರಣೆ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

'ಕನಸಿನ ಎಡಿಟರ್'!

ಯುವ ಪತ್ರಕರ್ತನ 'ಕನಸಿನ ಎಡಿಟರ್' ಒಂದು ಸುಳಿವನ್ನೂ ಕೊಡದೆ ಕಣ್ಮರೆಯಾಗಿದ್ದಾರೆ! ಇ. ರಾಘವನ್ ಕೈಗೆ ಆಯುಧ ಕೊಟ್ಟು, ರಣ ಬಿಸಿಲಿನ ಮೈದಾನದ ನಡುವೆ, ಶತ್ರುವನ್ನು ಗುರಿಇಟ್ಟು ತೋರಿಸಿ, ಮರೆಯಲ್ಲಿ ನಿಂತು ಮುಗುಳ್ನುಗುತ್ತಿದ್ದ ಭಾವ ಹಠಾತ್ ಗೊಂದಲಕ್ಕೀಡಾಗಿದೆ. ಒಂದು ವರ್ಷಕ್ಕೂ ಕಡಿಮೆ ಅವಧಿಯ ಒಡನಾಟವನ್ನು ಈ ಹೊತ್ತಿಗೆ ವಿವರಿಸಲು ಪದಗಳು ಸಿಗುತ್ತಿಲ್ಲ. ತೊಟ್ಟು ಕಟ್ಟಿಸಿಕೊಂಡು, ಸುವಾಸನೆ ಬೀರುವ ಮಾಲೆ ರೂಪಹೊಂದಿ, ಮಾರುಕಟ್ಟೆಯ ಬಿಸಿಲಿನಲ್ಲಿ ನೀರು ಚಿಮುಕಿಸಿಕೊಂಡು, ಗಿರಾಕಿಯ ಆಗಮನಕ್ಕಾಗಿ ಕಾಯುತ್ತಿದ್ದ "ಅಕ್ಷರ"ಗಳನ್ನೂ ಗೌರವದಿಂದಲೇ ನೋಡಿಕೊಳ್ಳುತ್ತಿದ್ದ ಸಂಪಾದಕರೊಬ್ಬರ ಕುರಿತು ಮಾತುಗಳಿವು. ಇಷ್ಟೆಲ್ಲಾ ಇಲ್ಯಾಕೆ ಹೇಳಬೇಕಾಗಿದೆ ಎಂದರೆ ನಿನ್ನೆ(ಶನಿವಾರ) ನಂ.1 ಕನ್ನಡ ಪತ್ರಿಕೆಯ ಸಂಪಾದಕ ಎತಿರಾಜನ್ ರಾಘವನ್ ನಮ್ಮನ್ನಗಲಿದ್ದಾರೆ. ಅವರ ಕೆಳಗೆ ಕೆಲಸ ಮಾಡಿದ ಅನುಭವ ಇದೇ ಮೇ.18ಕ್ಕೆ ಒಂದು ವರ್ಷ ತುಂಬುತ್ತದೆ, ಅಷ್ಟೆ! ಅವರು ತೀರಿಕೊಂಡರು ಎಂಬ ಸುದ್ದಿ 'ಸ್ಫೋಟ'ವಾಗುವ ಹೊತ್ತಿಗೆ ನಾನು ಕಚೇರಿಯಲ್ಲಿದ್ದೆ. ಕಳೆದ ನೂರ ಎಪ್ಪತ್ತು ಚಿಲ್ಲರೆ ದಿನಗಳ ಹಿಂದೆ ಶುರುವಾದ 'ಯುವ ಗರ್ಜನೆ' ಎಂಬ ಪರಿಕಲ್ಪನೆಗೆ ದೊಡ್ಡ ಮೈಲಿಗಲ್ಲು ಸಿಕ್ಕ ದಿನ ಅದು. ಪ್ರಾದೇಶಿಕ ಭಾಷೆಯ ಪತ್ರಿಕೆಯೊಂದು ಕಾರ್ಪೋರೇಟ್ ಜಗತ್ತಿನ ವೇದಿಯಲ್ಲಿ ನಿಂತು ತಮ್ಮ ನಿಲುವನ್ನು ತಣ್ಣಗೆ ವಿವರಿಸಿದ ಸಮಯ ಕೂಡ. ಅದರ ವರದಿಗಾ...
ಮಂಗಳೂರು ಡೈರಿ! ಭಾಗ 1 ಜನವಾಹಿನಿಯ ಪಾಳು ಬಿದ್ದ ಬಂಗಲೆಯ ನೆರಳಿನಲ್ಲಿ.... ನಾನು ಎಂಟನೆ ತರಗತಿಯಲ್ಲಿದ್ದಾಗಿನ ನೆನಪು. ತೀರ್ಥಹಳ್ಳಿಯಲ್ಲಿ ನಾನಿದ್ದ ಹಾಸ್ಟೆಲ್ಲಿಗೆ ಜನವಾಹಿನಿ ಪತ್ರಿಕೆ ಬರುತ್ತಿತ್ತು. ಬೆಳಗ್ಗೆ ಆಗುತ್ತಲೆ ಪತ್ರಿಕೆಗಾಗಿ ಪೈಪೋಟಿ ನಡೆಸುತ್ತಿದ್ದೆವು. ಇದಕ್ಕಾಗಿ ಹಲವಾರು ಭಾರಿ ನಮ್ಮಲ್ಲಿ ಗಲಾಟೆಗಳು ಆಗಿದ್ದವು. ಅದೇಕೋ ಆವತ್ತು ಜನವಾಹಿನಿಯೊಂದಿಗೆ ಆರ್ಥವಾಗದ ಸಂದಂಧವೊಂದು ನಮ್ಮಂತ ಚಿಕ್ಕವಯಸ್ಸಿನ ಹುಡುಗರಿಗೆ ಬೆಳೆದಿತ್ತು. ಹಾಗೆಯೆ ಲಂಕೇಶ್ ಪತ್ರಿಕೆ ಕೂಡ ಅದರಲ್ಲಿ ಬರುತ್ತಿದ್ದ ತುಂಟಾಟಕ್ಕಾಗಿ ಓದುತ್ತಿದ್ದೆವು!. ಇವೆಲ್ಲವೂ ಹಳೆಯ ದಿನಗಳು, ಮಾಸಿದ ನೆನಪುಗಳು. ಸಹಜವಾಗಿಯೆ ನಾನು ಸಾಹಿತ್ಯದ ಬಗ್ಗೆ ಬೆಳೆಸಿ ಕೊಂಡಿದ್ದ ಆಸಕ್ತಿ, ನನ್ನಲ್ಲಿ ಹಲವು ಆಲೋಚನೆಗಳನ್ನು ಹುಟ್ಟುಹಾಕಿತು. ಹೊಸ ಪ್ರಪಂಚವೊಂದನ್ನು ಕಂಡ ಆನುಭವ. ಮಲೆನಾಡಿನಲ್ಲಿಯೆ ಹುಟ್ಟಿ ಬೆಳೆದು ಆಲ್ಲಿನ ಪರಿಸರದ ಜೊತೆ ಹೊಂದಿದ ಸಂಬಂಧವೊಂದು ಕಳಚಿಕೊಂಡದ್ದು ಚಳುವಳಿ ಹೋರಾಟ ಅಂತ ಬೀದಿಗೆ ಬಿದ್ದ ಮೇಲೆಯೆ. ಅಲ್ಲಿಯವರೆಗಿದ್ದ ಊರಲ್ಲಿ ಶಿಕಾರಿ ಹುಚ್ಚು, ಕಾಡು ಸುತ್ತುವ ಗೀಳುಗಳು ವೈಚಾರಿಕತೆ ಎಂಬ ಸೋಗಿನಲ್ಲಿ ಪೇವಲವಾಗಿ ಕಂಡಿದ್ದವು. ಜನವಾಹಿನಿ ನಂತರ ಇಷ್ಟವಾಗಿದ್ದು ಆದು ಪ್ರಗತಿಪರ ವಿಚಾರಗಳನ್ನು ಪ್ರತಿಪಾದಿಸುವ ಪತ್ರಿಕೆ ಎಂಬ ಕಾರಣಕ್ಕೆ. ಹಾಗಂತ ನಾನು ನಂಬಿಕೊಂಡಿದ್ದೆ. ಆಷ್ಟರಲ್ಲಾಗಲೆ ಅದು ತನ್ನ ಆಂತರಿಕ ಜಗಳಗಳಿಂದಾಗಿ ಮುಚ್ಚಿಹೋಗುತ್ತು. ಹಾಸ್ಟೆಲ್ಲಿಗೆ ಈ...
ಕಲ್ಲೂರಿ ಎಂಬ ಸಿನಿಮಾ ನೋಡಿದ್ದೀರಾ...? ಪ್ರಶಾಂತ್ ಹುಲ್ಕೋಡು ಸಿನಿಮಾ ಹೇಗಿರಬೇಕು ಎಂದು ನಿರ್ದಿಷ್ಟವಾಗಿ ಹೇಳುವದು ಕಷ್ಟ. ಆದರೆ ಒಳ್ಳೆಯ ಸಿನಿಮಾ ನೋಡುಗನ್ನು ತನ್ನಲ್ಲಿ ಒಂದು ಪಾತ್ರವಾಗಿಸುತ್ತದೆ ಅನ್ನುತ್ತಾರೆ. ಹಾಗಾಗಿಯೆ ಬಾಲಿವುಡ್ ಮಂದಿ ರಿಯಲ್ ಸ್ಟೋರಿಗಳನ್ನು ರೀಲ್‌ನಲ್ಲಿ ತರಲು ಹೆಚ್ಚು ಶ್ರಮವಹಿಸುತ್ತಾರೆ. ಬಾಲಿವುಡ್‌ನಲ್ಲಿಯೂ ಆಂತಹ ಪ್ರಯೋಗಗಳಾಗುತ್ತಿವೆ. ಬದುಕಿಗೆ ಹತ್ತಿರವೆನಿಸುವ ಕತೆಗಳನ್ನು ತೆರೆಗೆ ಅಳವಡಿಸುವುದು ಸುಲಭದ ಕೆಲಸವಲ್ಲ. ಅದಕ್ಕೆ ತನ್ನದೆ ಆದ ಕಮಿಟ್‌ಮೆಂಟ್, ಡೆಡಿಕೇಶನ್ ಇರಬೇಕಾಗುತ್ತದೆ. ಚಿತ್ರದ ನಿರ್ದೇಶಕನಿಗೆ ಅಂತಹ ಸಂವೇದನೆ ಇರದಿದ್ದರೆ ಇಡೀ ಚಿತ್ರ ಹಾಳಾಗಿಬಿಡುತ್ತದೆ. ಈ ಮಾತಿಗೆ ವಿರುದ್ಧವಾಗಿ ಇತ್ತೀಚೆಗೆ ಬಂದ ತಮಿಳಿನ ಕಲ್ಲೂರಿ ಉತ್ತಮ ಉದಾಹರಣೆ. ಈ ಚಿತ್ರದ ಕುರಿತು ಹೇಳುವ ಮುನ್ನ ನಿಮಗೆ ಇದನ್ನು ತೆರೆಗೆ ತಂದ ನಿರ್ದೇಶಕನ ಶ್ರಮದ ಕುರಿತು ಹೇಳಬೇಕು. ಅದು ಕಲ್ಲೂರಿಗಿಂತ ಲೂ ಇಂಟೆರಿಸ್ಟಿಂಗ್. ತಮಿಳಿನ ಪ್ರಸಿದ್ಧ ಚಿತ್ರ ಕಾದಲ್ ನೆನಪಿರಬೇಕು ನಿಮಗೆ. ಅಂತರಜಾತಿ ಪ್ರೇಮ ಕತೆಯನ್ನು ಅದ್ಭುತವಾಗಿ ನಿರೂಪಿಸಿದ ಚಿತ್ರ. ಅದರ ನಿರ್ದೇಶಕ ಬಾಲಾಜಿ ಶಕ್ತಿವೇಲು ಕಾದಲ್ ನಂತರ ನಿರ್ದೇಶಿಸಿದ ಚಿತ್ರವೇ ಕಲ್ಲೂರಿ. ತಮಿಳಿನಲ್ಲಿ ಕಲ್ಲೂರಿ ಎಂದರೆ ಕಾಲೇಜು ಎಂದರ್ಥ. ಕಾದಲ್ ಸೂಪರ್ ಹಿಟ್ ಆದ ನಂತರ ಬಾಲಾಜಿ ಶಕ್ತಿವೇಲು ಮುಂದೆ ನಿರ್ಮಾಪಕರ ದಂಡೇ ನೆರೆದಿತ್ತಂತೆ. ಆದರೆ ಈ ಮಹಾಶಯ ಯಾವುದನ್ನು ಒಪ್ಪಿಕೊಳ್ಳದೆ ಆರ್ಥಿಕ...