ವಿಷಯಕ್ಕೆ ಹೋಗಿ
ಮಂಗಳೂರು ಡೈರಿ ಕೊನೆಯ ಭಾಗ

ಸಲಿಂಗಿ ಪ್ರೇಮಿ(?)ಗಳ ನೆನಪಿನಲ್ಲಿ...!

ಕಡಲ ತಡಿಯ ಈ ಊರುಗೆ ಹಲವು ಭಾಷೆಗಳಲ್ಲಿ ಬೇರೆ ಬೇರೆ ಹೆಸರುಗಳಿವೆ ಅನ್ನುವುದೆ ಕುತೂಹಲಕಾರಿ ಸಂಗತಿ. ನಮ್ಮ ಊರುಗಳ ಹೆಸರು ಜಗತ್ತಿನ ಯಾವ ಭಾಷೆಯಾದರು ತನ್ನ ಗುಣ ಧರ್ಮವನ್ನು ಬಿಟ್ಟು ಕೊಡುವುದಿಲ್ಲ. ಆದರೆ ಮಂಗಳೂರು ಕನ್ನಡ ಭಾಷೆಯ ಹೆಸರು ಮಾತ್ರ. ಇದು ಸರಕಾರಿ ಕಡತಗಳಲ್ಲಿ ಅಧಿಕೃತತೆ ಹೊಂದಿರಬಹುದೇನೋ, ಆದರೆ ಜನ ಸಂಸ್ಕೃತಿ ಭಾಷೆಗಳಲ್ಲಿ ತಮ್ಮದೆ ಹೆಸರಗಳನ್ನು ಮಂಗಳೂರಿಗೆ ನೀಡಿದ್ದಾರೆ. ತುಳು ಭಾಷಿಕರು ಇದನ್ನು ‘ಕುಡ್ಲ’ ಎನ್ನುತ್ತಾರೆ. ಬ್ಯಾರಿ ಮಾತನಾಡುವವರಿಗೆ ಇದು ‘ಮೈಕಳ’ವಾಗಿದೆ. ಹತ್ತಿರದ ಕೇರಳಿಗರ ಮಲೆಯಾಳಂನಲ್ಲಿ ಇದು ‘ಮಂಗಳಾಪುರ’.


ಪುಸ್ತಕ ಪ್ರೀತಿ, ಅಕ್ಷರ ಪ್ರೀತಿಗಳು ಇಲ್ಲಿ ಹೆಚ್ಚು ಕಾಣಸಿಗುತ್ತವೆ. ಜೀವನಾನುಭವವನ್ನು ಕತೆಯಾಗಿಸಿದ ಅದ್ಭುತ ಕತೆಗಾರರು ದಕ್ಷಿಣ ಕನ್ನಡದಿಂದ ಮೂಡಿ ಬಂದಿದ್ದಾರೆ. ಆದರೆ ಕಳೆದ ಎರಡು ತಿಂಗಳಲ್ಲಿ ಕಂಡಿದ್ದು ಮಂಗಳೂರಿನ ಬದಲಾದ ಪರಿಸ್ಥಿತಿ. ಸೃಜನಶೀಲತೆಗಿಂತ ಇಲ್ಲಿ ಧಾರ್ಮಿಕ ಕಟ್ಟಳೆಗಳು ಬಹುಮುಖ್ಯವಾಗಿ ಕಾಡುತ್ತವೆ. ಇವತ್ತು ಧರ್ಮ ಐಡೆಂಟಿಟಿ ನೀಡುತ್ತಿದೆ. ಹಿಂದುತ್ವ ಪ್ರಬಲವಾಗುತ್ತಿರುವ ಜೊತೆಯಲ್ಲೇ ಮುಸ್ಲಿಂ, ಕ್ರಿಶ್ಚಿಯನ್ ಧರ್ಮದವರು ತಮ್ಮ ಧಾರ್ಮಿಕ ಐಡೆಂಟಿಟಿಗಾಗಿ ಸೆಣಸಾಡುತ್ತಿದ್ದಾರೆ.
ಇಲ್ಲಿನ ಮತ್ತೊಂದು ವಿಶೇಷ ಸಂಜೆ ಪತ್ರಿಕೆಗಳದ್ದು. ಮುಖ ಪುಟದ ತುಂಬಾ ಭೀಕರ ಚಿತ್ರಗಳನ್ನು ಹೊತ್ತು ಬರುವ ಸಂಜೆ ಪತ್ರಿಕೆಗಳು ಮದ್ಯಾನಕೆಲ್ಲ ಸ್ಟಾಲುಗಳಲ್ಲಿ ನೇತಾಡುತ್ತಿರುತ್ತವೆ. ಆಟೋದವರು, ಸಿಟಿ ಬಸ್ಸುಗಳ ಕಂಡಕ್ಟರ್‌ಗಳು ಒಂದು ಕೈಯಲ್ಲಿ ಸಂಜೆ ಪತ್ರಿಕೆಗಳನ್ನು ಹಿಡಿದುಕೊಂಡು ತಮ್ಮ ಕೆಲಸ ಮಾಡುತ್ತಿರುತ್ತಾರೆ. ಯಾವಾಗಲೋ, ಮತ್ತೆಲ್ಲೋ ಸಂಭವಿಸಿದ ಕೊಲೆಯ ಫಾಲೋ‌ಅಪ್‌ಗಾಗಿ ತುಡಿಯುತ್ತಿರುತ್ತಾರೆ. ಅದನ್ನೇ ಪತ್ರಿಕೆಗಳು ಉಣ ಬಡಿಸುತ್ತವೆ. ಅಥವಾ ಪತ್ರಿಕೆಗಳು ಬೆಳೆಸಿದ ಇಂತಹ ಅಭಿರುಚಿ ಇದಕ್ಕೆ ಕಾರಣ ವಿರಬಹುದು. ಪತ್ರಿಗಳಲ್ಲಿ ಬರುವ ಅರೆನಗ್ನ ಚಿತ್ರಗಳನ್ನು ಕದ್ದು ಮುಚ್ಚಿಯಾದರು ನೋಡುವ ಮನಸ್ಥಿತಿ ಎಲ್ಲರಲ್ಲೂ ಇದೆ. ಇದನ್ನು ಕೊಡಲಾರವನು ಸೆಣಸಾಟದಲ್ಲಿ ಹಿಂದೆ ಬೀಳುತ್ತಾನೆ.

ಬಹುತೇಕ ಆಟೋ ಡ್ರೈವರ್‌ಗಳು ಮಾಫಿಯಾ ಜೊತೆ ಸಂಪರ್ಕ ಹೊಂದಿದ್ದಾರೆ. ನಿಮಗೆ ಬೇಕಾದ ‘ಮಾಲ’ನ್ನು ಎದುರಿಗೆ ನಿಲ್ಲಿಸುತ್ತೇವೆ ಎಂದು ಹೇಳಿದ ಆಟೋ ಡ್ರೈವರ್‌ಗಳನ್ನು ಸುಮ್ಮನೆ ಮಾತನಾಡಿಸಿದರೆ, ಮಂಗಳೂರಿನ ಮೇಲ್ನೋಟದ ಐಶಾರಾಮಿ ಬದುಕಿನ ದುಸ್ವಪ್ನಗಳಿಗೆ ಅವರು ಒಳಗಾಗಿರುವುದು ಕಾಣುತ್ತದೆ.

ಇಂದು ಸಿಟಿ ಬಸ್ಸಿನಲ್ಲಿ ನಡೆದ ಘಟನೆಯನ್ನು ತಿಳಿಸದಿದ್ದರೆ ಮಂಗಳೂರಿನ ಅನುಭವ ಪರಿಪೂರ್ಣವಾಗುವುದಿಲ್ಲ. ಅನಾಮಿಕ ಸ್ಟಾಪೊಂದರಲ್ಲಿ ಹತ್ತಿದ ಸಿಟಿ ಬಸ್ಸು ಆಗಲೆ ಬೆವರಿದ ಮುಖಗಳನ್ನು ತುಂಬಿಕೊಂಡಿತ್ತು. ಹಿಂದಿನ ಸೀಟಿನಲ್ಲಿ ಸಲಿಂಗಿಗಳ ದಂಪತಿ(?) ಕುಳಿತಿತ್ತು. ಇಬ್ಬರು ಮಹಿಳೆಯರು ಸಹಜವಾಗಿ ಹುಡುವ ಸೀರೆ ಉಟ್ಟಿದ್ದರು. ಆದರೆ ಇಬ್ಬರಲ್ಲಿ ಸಮಾಜದ ಇತರೆ ಪ್ರೇಮಿಗಳಲ್ಲಿರುವ ಭಾವನೆಗಳು ಕಣ್ಣಿಟ್ಟು ತಡಕಾಡಿದರೆ ಮಾತ್ರ ತಿಳಿಯುವಂತಿತ್ತು. ನಾನು ಹತ್ತಿದ ತಕ್ಷಣ ನನ್ನೆಡೆ ಇಬ್ಬರ ಹರಿಸಿದ ನೋಟದಲ್ಲಿಯೇ ಅಂತಹ ಭಾವಗಳು ಕಾಣುತ್ತಿದ್ದವು. ಕಿಟಕಿ ಬಳಿ ಕುಳಿತಿದ್ದ ಸಲಿಂಗಿಗೆ ಹೆಣ್ಣಿನ ಸುಪ್ತ ಭಾವನೆಗಳು ಆವರಿಸಿಕೊಂಡಂತಿತ್ತು. ಇತರ ಹುಡುಗರು ತನ್ನನ್ನು ನೋಡುತ್ತಾರಾ ಎಂಬ ಕುತೂಹದ ಕಣ್ಣುಗಳಿಗೆ ನಾಚಿಕೆಯ ಮೆರಗು.


ಆದರೆ ಪಕ್ಕದಲ್ಲಿ ಸ್ವಲ್ಪ ದೃಢಕಾಯದ ಸಲಿಂಗಿಗೆ ಮಾತ್ರ ಗಂಡಿನ ಗಂಭೀರತೆ. ಜೇಬಿನಲ್ಲಿದ್ದ ಗುಟ್ಕಾದ ಪೊಟ್ಟಣವನ್ನು ತೆಗೆದು ಎಲ್ಲರ ಎದುರೆ ಬಾಯಿಗೆ ಹಾಕಿಕೊಂಡು ಮತ್ತೆ ತನ್ನ ಪ್ರೇಮಿಯೊಡನೆ ಮಾತಿನ ಸರಸ. ಅವಳ ಮೈಯ ಸ್ಪರ್ಷದ ಸುಖ ಅನುಭವಿಸುವ ಕಾತರತೆ. ಅವಳಿಗೋ ಯಾರಾದರು ನೋಡಿದರೆ ಎಂಬ ಕಪ್ಪೆ ಚಿಪ್ಪಿನ ಮನಸ್ಸು.

ಪಕ್ಕದಲ್ಲಿ ಕುಳಿತಿದ್ದ ‘ಸರಿ’ ಲಿಂಗಿ ಯುವಕನಿಗೆ ಮಾತ್ರ ಜನರು ಹಿಜಿಡಾಗಳ ಪಕ್ಕ ಕುಳಿತದ್ದಕ್ಕೆ ನನ್ನನ್ನು ಹೇಗೆ ನೋಡುತ್ತಾರೆ ಎಂಬ ಆತಂಕ. ಆದರೆ ಕುತೂಹಲಕ್ಕಾಗಿ ಅವರೆಡೆಗೆ ತಿರುಗುವ ಕಣ್ಣುಗಾಲಿಗಳು. ಅವನ ಪಕ್ಕದಲ್ಲಿ ಕುಳಿತಿದ್ದ ವಯಸ್ಸಾಯ ವ್ಯಕ್ತಿಯೊಬ್ಬರು ಸಲಿಂಗಿ ಪ್ರೇಮಿಗಳೆಡೆ ಕದ್ದು ಮುಚ್ಚು ತಮ್ಮ ನೋಟ ಹರಿಸುತ್ತಿದ್ದರು. ಅದು ಸಮಾಜದ ನಾಡಿ ಮಿಡಿತ. ಪ್ರತಿಯೊಬ್ಬರಿಗೂ ಇರುವ ಸುಪ್ತ ಭಾವನೆಗಳನ್ನು ‘ಸಚ್ ಕಾ ಸಾಮ್ನಾ’ ಸವಾಲಿಗೆ ಒಡ್ಡಲಾರದ ಭಯ. ಅರ್ಧ ಸತ್ಯ ಮತ್ತರ್ಧ ಮಿತ್ಯಗಳ ಮಿಶ್ರಣ.
ಹಾಗೆ ನೋಡುತ್ತಿರುವಾಗಲೇ ಬಸ್ಸು ಕಾಲಿಯಾಯಿತು. ನಾನು ಸಲಿಂಗಿ ಪ್ರೇಮಿಗಳ ಪಕ್ಕದಲ್ಲಿ ಕುಳಿತೆ. ಬಸ್ಸು ಮುಂದೆ ಹೋಗುವುದಿಲ್ಲವಾ? ಎಂದು ಸಹಜವಾಗಿಯೆ ಪ್ರಶ್ನಿಸಿ ಹೆಣ್ಣಿನ ಸಹಜತೆ ತೋರುತ್ತಿದ್ದ ಕಿಟಿಕಿ ಬದಿಯ ಕಣ್ಣುಗಳ ಜೊತೆ ನನ್ನ ಕಣ್ಣೊಟ ಬೆರೆಸಿದೆ. ‘ಏನಪ್ಪಾ, ಗೊತ್ತಾಗುತ್ತಿಲ್ಲ’ ಎಂದ ಉತ್ತರದಲ್ಲಿ ಸ್ವಲ್ಪ ರಾಗದ ಮಿಶ್ರಣ.

ಅದೇ ಮಂಗಳೂರಿನ ಕಡಲ ತಡಿಯಲ್ಲಿ ಮುಳುಗುತ್ತಿದ್ದ ಸೂರ‍್ಯನ ಕೆಂಬಣ್ಣ. ಎಲ್ಲವು ಅರ್ಥವಾದಂತಾಗಿ, ಮತ್ತೇನೊ ಗೊತ್ತಾಗದ ಗೊಂದಲದ ನೆನಪುಗಳು. ಮಂಗಳೂರು ಡೈರಿ ನಾಳೆ ಮತ್ತೆಲ್ಲಿಯದೋ ಡೈರಿ. ಅಕ್ಷರಗಳ ಸಂತೆಯಲ್ಲಿ ನೆನಪುಗಳ ಬಿಕರಿಗೆ ಮಾತ್ರ ದಿನವೂ ಸಂತೆ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ದೇವೆಂದ್ರ ಎಂಬ ಹಸನ್ಮುಖಿ….! ರಾಯಚೂರು ಮುಗುಸಿ, ಕೊಪ್ಪಳದ ಕೆಲವು ಹಳ್ಳಿಗಳಲ್ಲಿ ಓಡಾಡಿಕೊಂಡು ಸೀದಾ ಹೊರಟಿದ್ದು ಗದಗ ಜಿಲ್ಲೆಗೆ. ಅಲ್ಲಿನ ಕೆಲವು ಗೆಳೆಯರು ಜೊತೆಯಾಗುತ್ತೇವೆ ಎಂದು ಹೇಳಿದ್ದರು ನಾವು ತಲುಪುವ ಹೊತ್ತಿಗೆ ಅವರು ತಮ್ಮದೇ ಕೆಲಸದ ಮೇಲೆ ಹೊರಟು ಹೋಗಿದ್ದರು. ಗದಗ ಜಿಲ್ಲೆಯ ರೋಣ ತಾಲೂಕಿನ ಬಿ.ಎಸ್. ಬೆಲೇರಿ ಎಂಬ ಜಿಲ್ಲಾ ಕೇಂದ್ರದಿಂದ ೫೫ ಕಿ.ಮೀ ದೂರದ ಹಳ್ಳಿಯೊಂದನ್ನು ತಲುಪುವುದೇ ದೊಡ್ಡ ಸಾಹಸದ ಮಾತಾಗಿತ್ತು. ಊರಿಗಿದ್ದ ಒಂದು ಹಳೆಯ ಸೇತುವೆ ಬಿದ್ದು ಹೋಗಿದ್ದರಿಂದ ಹಳ್ಳಿಗೆ ರಸ್ತೆ ಸಂಪರ್ಕವೇ ಇಲ್ಲವಾಗಿತ್ತು. ನಾವು ಹೋಗುವಾಗ ಹೊಳೆಯ ನೀರು ಕಡಿಮೆಯಾಗಿತ್ತು. ಹೊಳೆಯ ವರೆಗೂ ಟಮ್ ಟಮ್ ಎಂದು ಕರೆಯುವ ಆಟೋ ರಿಕ್ಷಾವನ್ನು ಬಾಡಿಗೆಗೆ ಹಿಡಿದು ಅಲ್ಲಿಂದ ಮೂರು ಕಿಮೀ ನಡೆದರೆ ಬೇಲೆರಿ ಸಿಗುತ್ತದೆ. ನಿಂಗು ಬೆಲೇರಿಯಲ್ಲಿ ಪಿಯುಸಿ ಓದಿರುವ ಯುವಕ. ಅಷ್ಟೆ ಅಲ್ಲ ನಿಂಗುಗೆ ಸ್ವಲ್ಪ ರಾಜಕೀಯದ ಗೀಳಿದೆ. ಸ್ಥಳೀಯ ರಾಜಕಾರಣಿಗಳ ಸೋಗಲಾಡಿತನಗಳು ಅನುಭವಕ್ಕೆ ಬಂದಿವೆ. ನಮ್ಮೆದುರು ಆರಂಭದಲ್ಲಿ ನೆರೆಯ ಸುತ್ತಮುತ್ತಲೇ ಮಾತನಾಡಿದ ನಿಂಗು ಮಾತಿನಲ್ಲಿ ಒಂದು ಸಾತ್ವಿಕ ಸಿಟ್ಟಿತ್ತು. ನಿಧಾನವಾಗಿ ಮಾತನಾಡಲು ಆರಂಭಿಸಿ ಕೊನೆಗೆ ಸ್ಥಳೀಯ ಗ್ರಾಮ ಪಂಚಾಯ್ತಿಯಲ್ಲಿ ಮೊದಲು ಬದಲಾವಣೆ ಆಗ್ಬೇಕು, ಹಾಗಾಗಿ ಕೆಲಸಕ್ಕೆ ಗೆಳೆಯರು ಬೆಂಗಳೂರಿಗೆ ಹೋಗೊಣ ಅಂದ್ರು ಇಲ್ಲೇ ಇದ್ದೀನಿ, ಈಗ ನೋಡಿ ನೆರೆ. ಏನಾದ್ರೂ ಒಳ್ಳೆದೂ ಮಾಡ್ಬೇಕು ಅಲ್ವಾ ಎಂದು ಬೆಂಗಳೂರು ಕನ್ನಡದ
‘ಹೆಮ್ಮರ’ ಹಳ್ಳಿ ಶಾಲೆಯ ಮಕ್ಕಳಿಗೆ ವರ! “ಕನ್ನಡಿಗಳನ್ನು ಕಿಟಕಿಗಳಾಗಿ ಪರಿವರ್ತಿಸುವುದೇ ಶಿಕ್ಷಣದ ಬಹುಮುಖ್ಯ ಕರ್ತವ್ಯ” -ಸಿಡ್ನಿ ಜೆ ಹ್ಯಾರಿಸ್. ಭಾರತದಲ್ಲಿ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವುದು ಪ್ರಾಥಮಿಕ ಶಿಕ್ಷಣ. ಸರಕಾರಿ ಶಾಲೆಗಳಿಗೆ ಹೋಗುವ ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೂ ಕೆಲವೊಮ್ಮೆ ಹಳ್ಳಿ ಶಾಲೆಗಳಲ್ಲಿ ಕ್ರಿಯಾಶೀಲತೆಯ ಕುಡಿಗಳು ಅರಳುತ್ತವೆ. ಇದು ಭಾರತದಂತಹ ದೇಶದಲ್ಲಿರು ಮತ್ತೊಂದು ಸಾಧ್ಯತೆ. ಸೆಲೆಬ್ರಿಟಿಗಳು ಎಂದು ಕರೆಸಿಕೊಳ್ಳುವ ಬಹುತೇಕ ಮಂದಿ ಹಳ್ಳಿ ಶಾಲೆಗಳಲ್ಲಿ ಕಲಿತು ಬಂದಿರುವುದು ಇದಕ್ಕೆ ಸಾಕ್ಷಿ. ಶಿಕ್ಷಣ ಎನ್ನುವುದು ನಾವು ಕಲಿತದ್ದನ್ನು ಅಧಿಕೃತಗೊಳಿಸುತ್ತದೆ. ಶಿಕ್ಷಕರು ಕೇವಲ ಮಾರ್ಗದರ್ಶನ ನೀಡಬಹುದೇ ಹೊರತು ಅದರಾಚೆಗಿನ ನಿರೀಕ್ಷೆಗಳಿಗೆ ಅವರು ನೀರೆರೆಯಲು ಸಾಧ್ಯವಿಲ್ಲ. ಆದರೆ ಇಂತಹ ಸಣ್ಣ ಮಾರ್ಗದರ್ಶನಗಳು ಸರಕಾರಿ ಶಾಲೆಗಳಲ್ಲಿ ಸಿಗದಿರುವ ಕಾರಣಕ್ಕೆ ಖಾಸಗಿ ಶಾಲೆಗಳ ಮೊರೆ ಹೋಗುವ ಪೊಷಕರು ನಮ್ಮಲ್ಲಿದ್ದಾರೆ. ಸರಕಾರಗಳ ದೂರದೃಷ್ಠಿಯ ಕೊರತೆ, ಸೌಲಭ್ಯಗಳ ಕೊರತೆ ಹಾಗೂ ಶಿಕ್ಷಕರಲ್ಲಿ ಬದ್ದತೆಯ ಕೊರತೆಗಳು ಇಂದು ಭಾರತದ ಪ್ರಾಥಮಿಕ ಶಿಕ್ಷಣದಲ್ಲಿನ ಬಹುಮುಖ್ಯ ಕೊರತೆಗಳು. ಆದರೆ ಇವುಗಳ ನಡುವೆಯೇ ಕುಂ.ವಿ ತರಹದ ಆದರ್ಶ ಶಿಕ್ಷಕರು ಕುಗ್ರಾಮಗಳ ಶಾಲೆಗಳಲ್ಲಿ ಕ್ರಾಂತಿಕಾರಕ ಬದಲಾವಣೆ
ಮಹಾಮಾರಿಯ ಭೀತಿಯಲ್ಲಿದ್ದ ತಲೆಮಾರಿ ಹಾಗೂ ಆಂದ್ರದ ಕುರಿತು ಅಭಿಮಾನ! ಮುಂಜಾನೆ ಹೊರಡುವಾಗ ತಲುಪಲಿದ್ದ ಹಳ್ಳಿಯ ಹೆಸರು ಕೂಡ ಗೊತ್ತಿರಲಿಲ್ಲ. ಸ್ಥಳೀಯ ಎನ್‌ಜಿಒ ಒಂದರ ಸಹಾಯದಿಂದ ’ತಲೆಮಾರಿ’ ಹಳ್ಳಿಗೆ ಹೊರಟಿದ್ದೆವು. ರಾಯಚೂರಿನಿಂದ ಸುಮಾರು ೫೨ ಕಿಮೀ ದೂರದಲ್ಲಿರುವ ತಲೆಮಾರಿ ನಾವು ಕಂಡ ಇತರ ಹಳ್ಳಿಗಳಿಗೆ ಹೋಲಿಸಿದರೆ ಅತಿ ಹೆಚ್ಚು ಹಾನಿಗೊಳಗಾದ ಹಳ್ಳಿ. ನಿಂತ ನೆಲದಿಂದ ಸುಮಾರು ೪೦ ಅಡಿ ಎತ್ತರಕ್ಕೆ ನೆರೆಯ ನೀರು ನುಗ್ಗಿ ಬಂದಿತ್ತಂತೆ. ಅದಕ್ಕೆ ಕುರುವುಗಳಂತೆ ನಾವು ಹೋದಾದ ಅಳಿದುಳಿದ ಮನೆಯ ಗೋಡೆಗಳ ಮೇಲೆ ಕೆಸರು ನೀರಿನ ಕುರುವು ಉಳಿದುಕೊಂಡಿತ್ತು. ತಲೆಮಾರಿಯ ಇನ್ನೊಂದು ವಿಶೇಷ ಎನಪ್ಪಾ ಅಂದ್ರೆ, ರಾಯಚೂರಿನ ಇತರ ನೆರೆ ಪೀಡಿತ ಹಳ್ಳಿಗಳಿಗೆ ಇಲ್ಲಿನ ಜನ ಮಾದರಿಯಾಗಿದ್ದರು. ನೆರೆ ನಿಂತು ಮೂರು ದಿನಗಳದ್ರೂ ಯಾವ ಜನಪ್ರತಿನಿಧಿಗಳು ವಿಚಾರಿಸಿಕೊಳ್ಳಲಿಲ್ಲ ಎಂಬ ಸಿಟ್ಟಿಗೆ ಎಂಎಲ್‌ಎ ಕಾರಿಗೆ ಬೆಂಕಿ ಇಟ್ಟಿದ್ದರು ಹಳ್ಳಿಯ ಜನ. ನಾವು ಹೋದಾಗ ಒಂದು ಪೊಲೀಸ್ ತುಕುಡಿ ಅತಂಕದಿಂದಲೇ ಊರು ಕಾಯುತ್ತಾ ನಿಂತಿತ್ತು. ಸುಟ್ಟು ಕರಕಲಾದ ವಾಹನಗಳು ನೆರೆಯ ಸ್ಮಾರಕಗಳಂತೆ ಉಳಿಸಿಕೊಂಡಿದ್ದರು. ಊರು ತುಂಬ ಸತ್ತ ಎಮ್ಮೆಗಳ ಹೆಣಗಳ ತುಂಬಾ ಹುಳುಗಳು ಮಿಜಿಗುಡುತ್ತಿದ್ದವು. ಮುಂದೆ ಎದುರಾಗಬಹುದಾದ ಮಹಾಮಾರಿಯೊಂದರ ಮುನ್ಸೂಚನೆಯಂತೆ ಊರು ಗಬ್ಬು ವಾಸನೆ ಹೊಡೆಯುತ್ತಿತ್ತು. ಊರೊಳಗೆ ಕಾಲಿಡಲಾಗದಂತೆ ಕೆಸರು ತುಂಬಿಕೊಂಡಿತ್ತು. ಆದರೆ ಬಹುತೇಕರು ತಮ್ಮ ಮನೆಗಳ ಒಳಗೆ ಅಳಿದ